ನಗರದಲ್ಲಿರುವ ಎಚ್.ಕೆ.ಸಂದೇಶ್ ಅವರ ನಿವಾಸಕ್ಕೆ ಮುಖಂಡರೊಂದಿಗೆ ತೆರಳಿ, ಕುಟುಂಬ ಸದಸ್ಯರೊಂದಿಗೆ ಕುಳಿತು ತಿಂಡಿ ತಿಂದರು. ಈ ವೇಳೆ ದಲಿತ ಮುಖಂಡ ಕೃಷ್ಣಕುಮಾರ್, ನಾರಾಯಣದಾಸ್ ಸೇರಿದಂತೆ ಹಲವರು ಸಾಥ್ ನೀಡಿದರು.
‘ಬಿಜೆಪಿ ದಲಿತ ವಿರೋಧಿಗಳಲ್ಲ. ದಲಿತರನ್ನು ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆ. ದಲಿತ
ವಿರೋಧಿಯಾಗಿರುವ ಜೆಡಿಎಸ್ ತಿರಸ್ಕರಿಸಿ, ಬಿಜೆಪಿ ಬೆಂಬಲಿಸುವಂತೆ’ ಮಂಜು ಕೋರಿದರು.