ಅಲ್ಲದೆ, ಹೊಳೆಯಿಂದ ಆಚೆ ಬದಿಯಲ್ಲಿ ದೋನಹಳ್ಳಿ ಗ್ರಾಮದ ತೇಜಪಾಲ್, ಗಿರೀಶ್, ಯೋಗೇಶ್, ರಾಮಚಂದ್ರ, ಅಪ್ಪಣ್ಣ ಸೇರಿದಂತೆ ಇನ್ನೂ ಹಲವು ರೈತರ ತೋಟ ಹಾಗೂ ಗದ್ದೆಗಳು ಇವೆ. ಸೇತುವೆ ಮುರಿದು ಬಿದ್ದಿರುವುದರಿಂದ ಅತ್ತ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಬಾಚನಹಳ್ಳಿ, ಅವರೇಕಾಡು, ಹಾನುಬಾಳು ಮಾರ್ಗವಾಗಿ ಸುಮಾರು 15 ಕಿ.ಮೀ ಸುತ್ತಿಕೊಂಡು ಹೋಗಬೇಕಾಗಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಹಳ್ಳದಲ್ಲಿ ಪುನಃ ಪ್ರವಾಹ ಉಂಟಾಗಿದೆ. ಇದರಿಂದ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ.