ಜಯಮ್ಮ (54) ಮೃತಪಟ್ಟವರು. ಶುಂಠಿ ತಾಕಿನಲ್ಲಿ ಕಳೆ ತೆಗೆಯುತ್ತಿದ್ದಾಗ ಹಾವು ಕಚ್ಚಿದ್ದು,
ಏನೋ ಕಚ್ಚಿದ ಅನುಭವವಾದ್ದರಿಂದ ಅಲ್ಲೇ ಹುಡುಕಾಡಿದ ಜಯಮ್ಮ ತಾವು ಸ್ವತಃ ಹಾವನ್ನು ನೋಡಿ ಗಾಬರಿಗೊಂಡು ಭಯದಿಂದ ಕೂಗಿದ್ದಾರೆ. ಅಕ್ಕಪಕ್ಕದ ಜಮೀನಿನ ರೈತರು ಬಂದು ಕೊಣನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.