‘ಹಾಸನದಿಂದ ನನ್ನ ಮಗನಿಗೆ ಟಿಕೆಟ್ ಕೊಡುವುದಾಗಿ ಬಿಜೆಪಿಯವರೇ ಹೇಳಿದ್ದರು. ಅದಕ್ಕೆ ₹ 5 ಕೋಟಿ ಬಂಡವಾಳ ಹಾಕುವುದಾಗಿ ಪಕ್ಷದ ಸಭೆಯಲ್ಲಿ ಶಾಸಕ ಪ್ರೀತಂ ಗೌಡ ಸಹ ಭರವಸೆ ನೀಡಿದ್ದರು. ನಂತರ ಮಂತ್ರಿ ಸ್ಥಾನ ಕೊಡದಿದ್ದಕ್ಕೆ ಬೆಂಬಲ ನೀಡಲ್ಲ ಎಂದರು. ಅಲ್ಲದೇ, ಅವರ ಬೆಂಬಲಿಗರನ್ನುಮಗ ಮಂಥರ್ ಗೌಡ ಬಳಿ ಕಳುಹಿಸಿ, ಹಾಸನದಲ್ಲಿ ಸ್ಪರ್ಧಿಸಬೇಡ ಎಂದು ಹೇಳಿಸಿದ್ದರು. ಅವರೇ ನಮ್ಮ ಕುಟುಂಬವನ್ನು ಒಡೆದರು’ ಎಂದು ಬೇಸರ ವ್ಯಕ್ತಪಡಿಸಿದರು.