‘ಕಾನೂನು ಬಾಹಿರವಾಗಿ ನಗರಸಭೆ ಅಧಿಕಾರ ಹಿಡಿದಿರುವ ಬಿಜೆಪಿ, ಒಂಬತ್ತು ತಿಂಗಳಿನಿಂದ ಸಾಮಾನ್ಯ ಸಭೆ ನಡೆಸಿರಲಿಲ್ಲ. ಕಳೆದ ತಿಂಗಳು ನಡೆದಸಾಮಾನ್ಯ ಸಭೆಯಲ್ಲಿ ಕೇವಲ 12 ಮಂದಿ ಸದಸ್ಯರ ಸಹಿ ಪಡೆದುವಿಷಯಗಳನ್ನು ಅಂಗೀಕರಿಸಲಾಗಿದೆ ಎಂದು ಷರಾ ಬರೆದಿದ್ದರು. ಈ ಬಗ್ಗೆ ಜೆಡಿಎಸ್ನ 21 ಮಂದಿ ಜಿಲ್ಲಾಧಿಕಾರಿಗೆ ದೂರು ನೀಡಿದಾಗ ಹಿಂದಿನಸಾಮಾನ್ಯ ಸಭೆಯನ್ನು ರದ್ದುಪಡಿಸಿ ಹೊಸದಾಗಿ ಸಭೆ ಕರೆಯುವಂತೆ ಡಿ.ಸಿಆದೇಶ ಹೊರಡಿಸಿದ್ದರು. ಈವರೆಗೂ ಆದೇಶ ಪಾಲನೆ ಮಾಡದ ಆಯುಕ್ತರನ್ನುಅಮಾನತು ಮಾಡಬೇಕು. ಇಲ್ಲವಾದರೆ ಪ್ರಾಧಿಕಾರದ ಮೊರೆಹೋಗಲಾಗುವುದು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.