ಸಕಲೇಶಪುರ (ಹಾಸನ ಜಿಲ್ಲೆ): ತಾಲ್ಲೂಕಿನ ಬಾಳ್ಳುಪೇಟೆಯ ಬನವಾಸೆ ಗ್ರಾಮದ ಹೊರವಲಯದಲ್ಲಿ, ಎರಡು ಚಿರತೆ ಬೆಕ್ಕುಗಳ ಕಳೇಬರ ಶನಿವಾರ ಪತ್ತೆಯಾಗಿವೆ.
ಅಂದಾಜು 8 ತಿಂಗಳು ಪ್ರಾಯದ ಈ ಬೆಕ್ಕುಗಳು ವಾರದ ಹಿಂದೆ ಮೃತಪಟ್ಟಿವೆ ಎನ್ನಲಾಗಿದೆ. ಜಮೀನಿನ ಮಾಲೀಕ ಶಾಂತೇಗೌಡ ಅವರು ಶನಿವಾರ ಕೆಲಸಕ್ಕೆ ತೆರಳಿದ್ದಾಗ ಸತ್ತು ಬಿದ್ದಿದ್ದ ಈ ಅಪರೂಪದ ಪ್ರಾಣಿಗಳನ್ನು ಕಂಡು, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆ ನಂತರ, ಬೆಕ್ಕುಗಳ ಸಾವಿಗೆ ಕಾರಣ ತಿಳಿಯಲಿದೆ ಎಂದು ಸಕಲೇಶಪುರ ವಲಯ ಅರಣ್ಯಾಧಿಕಾರಿ ರವೀಂದ್ರ ತಿಳಿಸಿದ್ದಾರೆ.