‘ಪ್ರಭಾವಿಗಳು ಅಥವಾ ಅವರ ಕಡೆಯವರು ನೀರು ಪಾಲಾಗಿದ್ದರೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಬರುತ್ತಿದ್ದರು. ಮೃತಪಟ್ಟವರು ಬಡವರು ಆಗಿರುವ ಕಾರಣ ಇತ್ತ ಮುಖ ಹಾಕಿಲ್ಲ’ ಎಂದು ಪ್ರತಿಭಟನೆ ನಡೆಸಿದರು.
‘ಅಗ್ನಿಶಾಮಕ ಸಿಬ್ಬಂದಿ ನೀರಿಗೇ ಇಳಿದಿಲ್ಲ. ಈ ವಿಚಾರದಲ್ಲಿ ರಾಜಕೀಯ ಅಥವಾ ಪಕ್ಷಪಾತ ಮಾಡದೆ, ಶೀಘ್ರವೇ ಮೃತದೇಹ ಹುಡುಕಿಕೊಡಬೇಕು. ಹುಣಸವಳ್ಳಿ ಬಳಿಯ ಯಗಚಿ ನದಿಯ ದಡದಲ್ಲಿ ಅಪಾಯದ ಸ್ಥಳ ಎಂಬ ನಾಮಫಲಕ ಹಾಕುವಂತೆ’ ಸ್ಥಳೀಯರಾದ ಹರೀಶ್, ಶಿವಸ್ವಾಮಿ ಮನವಿ ಮಾಡಿದರು.