<p><strong>ಹಾಸನ:</strong> ಸಮಾಜದ ಅಸಮಾನತೆ ತೊಳೆದು ಹಾಕಲು ಶಿಕ್ಷಣದಿಂದ ಮಾತ್ರ ಸಾಧ್ಯ. ಎಲ್ಲಾ ಕಷ್ಟದ ಸಮಯದಲ್ಲಿ ಶಿಕ್ಷಣ ಪಾರು ಮಾಡುತ್ತದೆ ಎಂದು ಬೆಂಗಳೂರು ಸಿಐಡಿ ವಿಭಾಗದ ಎಸ್ಪಿ ರವಿ ಡಿ. ಚನ್ನಣ್ಣನವರ ಅಭಿಪ್ರಾಯಪಟ್ಟರು.</p>.<p>ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಡಿಸಿ ಕರಿಯರ್ ಅಕಾಡೆಮಿ, ವೈಇಎಸ್ - ಯುಪಿಎಸ್ಸಿ ಫೌಂಡೇಷನ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಜಿಲ್ಲಾಮಟ್ಟದ ಉಚಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಮನುಷ್ಯನಿಗೆ ಬೇಕಾಗಿ ರುವುದು ಮನುಷ್ಯತ್ವ. ಅಂಥವರು ದೊಡ್ಡ ಹುದ್ದೆಗೆ ಬಂದರೆ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು’ ಎಂದು ಹೇಳಿದರು.</p>.<p>‘ಜವಾಬ್ದಾರಿ ಹೊತ್ತ ವ್ಯಕ್ತಿಗಳಾಗಿರುವ ನಾವು ಸಣ್ಣ ಇಲ್ಲವೆ, ದೊಡ್ಡ ಹುದ್ದೆಗಳಾಗಿರಲಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು ಎನ್ನುವ ಮನೋಭಾವ ನನ್ನಲ್ಲಿ ಇತ್ತು ಎಂದರೆ, ನಿಮ್ಮನ್ನು ಜನರು ಮರೆಯುವುದಿಲ್ಲ’ ಎಂದರು.</p>.<p>‘ಆಯ್ದುಕೊಂಡ ಹುದ್ದೆ ಯಾವುದೇ ಆಗಿರಲಿ, ಮೊದಲು ನನ್ನಲ್ಲಿ ತಪ್ಪು ರೀತಿ, ಸೇವಾ ಕೊರತೆ, ಜನಪರ ಕಾಳಜಿ ಇದೆಯಾ ಎಂಬುದನ್ನು ನೋಡಿಕೊಳ್ಳಬೇಕು. ಸಂವಿಧಾನದ ಅಡಿ ಹೇಗೆ ಜನರ ಸಮಸ್ಯೆ ಬಗೆಹರಿಸಬೇಕು ಎಂಬ ದೃಷ್ಟಿಕೋನದಿಂದ ಕಾನೂನು, ಕಾಯ್ದೆ ನೋಡಿದರೆ ಬೆಲೆ ಸಿಗಲಿದೆ’ ಎಂದು ಹೇಳಿದರು.</p>.<p>‘ನಿಮಗೆ ಸಾಮಾಜಿಕ ಸಮಸ್ಯೆ ಬಗ್ಗೆ ಕಾಳಜಿ ಇದ್ದರೆ, ಆತ್ಮ ವಿಶ್ವಾಸ, ಶ್ರದ್ಧೆ ಇದ್ದರೆ ಸಾರ್ವಜನಿಕ ಸೇವೆ ವೇದಿಕೆ ಒದಗಿಸುತ್ತದೆ. ಭಾರತದ ನಾಲ್ಕು ಸ್ತಂಭಗಳಾಗಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗಗಳುಇವೆ. ಪೊಲೀಸ್ ಅಧಿಕಾರಿಯಾಗಲಿ, ಸಿಬ್ಬಂದಿಯಾಗಲಿ ಕರ್ತವ್ಯ ಅರಿತು ಕೆಲಸ ಮಾಡುವುದನ್ನು ಮರೆಯಬಾರದು’ ಎಂದು ಸಲಹೆ ನೀಡಿದರು.</p>.<p>‘ವಿವಿಧ ಸಮಸ್ಯೆ ಹೊತ್ತು ಪೊಲೀಸ್ ಠಾಣೆಗೆ ಬರುವ ಯಾವುದೇ ಜನರನ್ನು ಪ್ರೀತಿ, ಸಮಾಧಾನ ಚಿತ್ತದಿಂದ ಮಾತನಾಡಿಸಿ ಸ್ಪಂದಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ನಾವಿರುವುದೇ ನಿಮ್ಮ ಕಣ್ಣೀರು ಒರೆಸಲು ಎಂದು ನೀವು ಹೇಳಿದರೆ, ನಿಮ್ಮ ಮೇಲೆ ಪ್ರತಿಯೊಬ್ಬರಲ್ಲೂ ಅಭಿಮಾನ ಹುಟ್ಟುತ್ತದೆ. ಕೆಟ್ಟ ಕೆಲಸ ಮಾಡಲು ಹೋದವರು ಪರಿವರ್ತನೆ ಆಗುತ್ತೇವೆ ಎಂದು ಬಂದರೆ ಅದಕ್ಕೆ ಅವಕಾಶ ಕೊಟ್ಟು ತಿದ್ದುವ ಕೆಲಸ ಮಾಡಿದರೆ ಸಾಕು’ ಎಂದರು.</p>.<p>ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ಗೌಡ, ಸಕಲೇಶಪುರ ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್, ಪತ್ರಕರ್ತ ಎಚ್.ಬಿ. ಮದನಗೌಡ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ಸಮಾಜದ ಅಸಮಾನತೆ ತೊಳೆದು ಹಾಕಲು ಶಿಕ್ಷಣದಿಂದ ಮಾತ್ರ ಸಾಧ್ಯ. ಎಲ್ಲಾ ಕಷ್ಟದ ಸಮಯದಲ್ಲಿ ಶಿಕ್ಷಣ ಪಾರು ಮಾಡುತ್ತದೆ ಎಂದು ಬೆಂಗಳೂರು ಸಿಐಡಿ ವಿಭಾಗದ ಎಸ್ಪಿ ರವಿ ಡಿ. ಚನ್ನಣ್ಣನವರ ಅಭಿಪ್ರಾಯಪಟ್ಟರು.</p>.<p>ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಡಿಸಿ ಕರಿಯರ್ ಅಕಾಡೆಮಿ, ವೈಇಎಸ್ - ಯುಪಿಎಸ್ಸಿ ಫೌಂಡೇಷನ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಜಿಲ್ಲಾಮಟ್ಟದ ಉಚಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಮನುಷ್ಯನಿಗೆ ಬೇಕಾಗಿ ರುವುದು ಮನುಷ್ಯತ್ವ. ಅಂಥವರು ದೊಡ್ಡ ಹುದ್ದೆಗೆ ಬಂದರೆ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು’ ಎಂದು ಹೇಳಿದರು.</p>.<p>‘ಜವಾಬ್ದಾರಿ ಹೊತ್ತ ವ್ಯಕ್ತಿಗಳಾಗಿರುವ ನಾವು ಸಣ್ಣ ಇಲ್ಲವೆ, ದೊಡ್ಡ ಹುದ್ದೆಗಳಾಗಿರಲಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು ಎನ್ನುವ ಮನೋಭಾವ ನನ್ನಲ್ಲಿ ಇತ್ತು ಎಂದರೆ, ನಿಮ್ಮನ್ನು ಜನರು ಮರೆಯುವುದಿಲ್ಲ’ ಎಂದರು.</p>.<p>‘ಆಯ್ದುಕೊಂಡ ಹುದ್ದೆ ಯಾವುದೇ ಆಗಿರಲಿ, ಮೊದಲು ನನ್ನಲ್ಲಿ ತಪ್ಪು ರೀತಿ, ಸೇವಾ ಕೊರತೆ, ಜನಪರ ಕಾಳಜಿ ಇದೆಯಾ ಎಂಬುದನ್ನು ನೋಡಿಕೊಳ್ಳಬೇಕು. ಸಂವಿಧಾನದ ಅಡಿ ಹೇಗೆ ಜನರ ಸಮಸ್ಯೆ ಬಗೆಹರಿಸಬೇಕು ಎಂಬ ದೃಷ್ಟಿಕೋನದಿಂದ ಕಾನೂನು, ಕಾಯ್ದೆ ನೋಡಿದರೆ ಬೆಲೆ ಸಿಗಲಿದೆ’ ಎಂದು ಹೇಳಿದರು.</p>.<p>‘ನಿಮಗೆ ಸಾಮಾಜಿಕ ಸಮಸ್ಯೆ ಬಗ್ಗೆ ಕಾಳಜಿ ಇದ್ದರೆ, ಆತ್ಮ ವಿಶ್ವಾಸ, ಶ್ರದ್ಧೆ ಇದ್ದರೆ ಸಾರ್ವಜನಿಕ ಸೇವೆ ವೇದಿಕೆ ಒದಗಿಸುತ್ತದೆ. ಭಾರತದ ನಾಲ್ಕು ಸ್ತಂಭಗಳಾಗಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗಗಳುಇವೆ. ಪೊಲೀಸ್ ಅಧಿಕಾರಿಯಾಗಲಿ, ಸಿಬ್ಬಂದಿಯಾಗಲಿ ಕರ್ತವ್ಯ ಅರಿತು ಕೆಲಸ ಮಾಡುವುದನ್ನು ಮರೆಯಬಾರದು’ ಎಂದು ಸಲಹೆ ನೀಡಿದರು.</p>.<p>‘ವಿವಿಧ ಸಮಸ್ಯೆ ಹೊತ್ತು ಪೊಲೀಸ್ ಠಾಣೆಗೆ ಬರುವ ಯಾವುದೇ ಜನರನ್ನು ಪ್ರೀತಿ, ಸಮಾಧಾನ ಚಿತ್ತದಿಂದ ಮಾತನಾಡಿಸಿ ಸ್ಪಂದಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ನಾವಿರುವುದೇ ನಿಮ್ಮ ಕಣ್ಣೀರು ಒರೆಸಲು ಎಂದು ನೀವು ಹೇಳಿದರೆ, ನಿಮ್ಮ ಮೇಲೆ ಪ್ರತಿಯೊಬ್ಬರಲ್ಲೂ ಅಭಿಮಾನ ಹುಟ್ಟುತ್ತದೆ. ಕೆಟ್ಟ ಕೆಲಸ ಮಾಡಲು ಹೋದವರು ಪರಿವರ್ತನೆ ಆಗುತ್ತೇವೆ ಎಂದು ಬಂದರೆ ಅದಕ್ಕೆ ಅವಕಾಶ ಕೊಟ್ಟು ತಿದ್ದುವ ಕೆಲಸ ಮಾಡಿದರೆ ಸಾಕು’ ಎಂದರು.</p>.<p>ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ಗೌಡ, ಸಕಲೇಶಪುರ ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್, ಪತ್ರಕರ್ತ ಎಚ್.ಬಿ. ಮದನಗೌಡ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>