‘ಅರೇಹಳ್ಳಿ ಹೋಬಳಿಯ ಶಿರಗುರ, ನೆರಲಮಕ್ಕಿ, ಮಲಸವಾರ, ಬಕ್ರವಳ್ಳಿ, ದಾಸನಗುಡ್ಡ ಗ್ರಾಮಗಳಲ್ಲಿ ಪದೇ ಪದೇ ಆನೆಗಳು ಕಂಡುಬರುತ್ತಿವೆ. ಮನೆಯ ಮುಂದೆಯೇ ಸಂಚರಿಸುತ್ತವೆ, ಇದರಿಂದ ಜನ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಸರ್ಕಾರ ಬೆಳೆ ನಷ್ಟದ ಪರಿಹಾರ ನೀಡಬೇಕು ಹಾಗೂ ಆನೆಗಳು ಬಾರದಂತೆ ಶಾಶ್ವತ ಯೋಜನೆ ರೂಪಿಸಬೇಕು’ ಎಂದು ಶಿರಗುರ ಗ್ರಾಮದ ಅಕ್ಷತ್, ಮೋಹನ್ ‘ಪ್ರಜಾವಾಣಿ’ ತಿಳಿಸಿದರು.