ಎತ್ತಿನಹೊಳೆ ಕಾಮಗಾರಿ ಪ್ರದೇಶದಲ್ಲಿ ಇದುವರೆಗೆ 2 ಲಕ್ಷ ಮರಗಳನ್ನು ಕಡಿಯಲಾಗಿದ್ದು, ಕೇವಲ ಎಂಟು ಸಾವಿರ ಮರಗಳ ಹನನ ಮಾಡಿರುವುದಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ನಾಶ ಮಾಡುವ ಪ್ರತಿ ಮರಕ್ಕೆ ಪರ್ಯಾಯವಾಗಿ ಎರಡು ಸಸಿ ನೆಡುವ ಹಾಗೂ ಐದು ವರ್ಷಗಳ ಪಾಲನೆ ಮಾಡುವ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ನೀಡಲಾಗಿದೆ. ಆದರೆ, ಈವರೆಗೆ ಸಸಿಗಳನ್ನು ನೆಟ್ಟಿಲ್ಲ. ಹಸಿರು ಪೀಠದ ಅಧಿಕಾರಿಗಳು ಭೇಟಿ ನೀಡುವ ಪ್ರದೇಶದಲ್ಲಿ ಮಾತ್ರ ಸಸಿ ನೆಟ್ಟಿದ್ದಾರೆ ಎಂದರು.