ಗ್ರಾಮದ ತೋಟದ ಮನೆಗಳ ಬಳಿ ಆಗಾಗ ಚಿರತೆ ಬಂದು ನಾಯಿ, ಕುರಿ, ಕೋಳಿಗಳನ್ನು ತಿನ್ನುತ್ತಿತ್ತು. ಈ ಬಗ್ಗೆ ಅರಣ್ಯ ರೈತರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಹತ್ತು ದಿನಗಳ ಹಿಂದೆ ಪ್ರಭಾಕರ್ ಎಂಬುವವರ ತೋಟದ ಮನೆಯ ಪಕ್ಕದಲ್ಲಿ ಬೋನು ಇಡಲಾಗಿತ್ತು. ಶನಿವಾರ ಬೆಳಿಗ್ಗೆ ಚಿರತೆ ಸೆರೆಯಾಗಿದೆ ಎಂದು ವಲಯ ಅರಣ್ಯಾಧಿಕಾರಿ ಎಚ್.ಆರ್.ಹೇಮಂತ್ ‘ಪ್ರಜಾವಾಣಿ’ಗೆ ತಿಳಿಸಿದರು.