ಹಾಸನ: ಅರಸೀಕೆರೆಯಲ್ಲಿ ನ. 30ರಂದು ಬಿಜೆಪಿಯ ಎರಡು ಗುಂಪುಗಳ ನಡುವಿನ ಮಾರಾಮಾರಿ ಸಂಬಂಧ ನಗರ ಠಾಣೆಯಲ್ಲಿ ಮೂರು ಎಫ್ಐಆರ್ ದಾಖಲಾಗಿವೆ.
ಎನ್.ಆರ್. ಸಂತೋಷ್ ಮತ್ತು ಅಣ್ಣಾಯಕನಹಳ್ಳಿ ವಿಜಯಕುಮಾರ್ ಬಣದವರು ಪರಸ್ಪರಹೊಡೆದಾಡಿಕೊಂಡಿದ್ದರು. ಹಲ್ಲೆಗೊಳಗಾಗಿದ್ದ ವಿಜಯ ಕುಮಾರ್ ಬಣದ ಮೋಹನ್ ನಾಯ್ಕ್ನೀಡಿದ ದೂರು ಆಧರಿಸಿ ನಗರಸಭೆ ಮಾಜಿ ಸದಸ್ಯ ಸೇರಿ ಐವರ ವಿರುದ್ಧ ಪ್ರಕರಣದಾಖಲಿಸಲಾಗಿದೆ.
ನಗರಸಭೆ ಮಾಜಿ ಸದಸ್ಯ ಹರ್ಷವರ್ಧನ್, ಚಂದ್ರಶೇಖರ್, ಸುಬ್ರಹ್ಮಣ್ಯ ಬಾಬು, ಸೈಯದ್ಸಿಖಂದರ್, ಮಟ್ಕಾ ಕುಮಾರ್ ವಿರುದ್ಧ ಎಫ್ಐಆರ್ ಆಗಿದೆ. ಪ್ರತಿಯಾಗಿ ಸಂತೋಷ್ ಬಣದವರುನೀಡಿದ ದೂರಿನ ಅನ್ವಯ, ವಿಜಯ ಕುಮಾರ್, ಮಲ್ಲಿಕಾರ್ಜುನ, ಶಶಿ, ಚರಣ್, ಶಿವರಾಜ್ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.