ಚೆನ್ನೈನಿಂದ ಬಂದಿದ್ದ ಇಬ್ಬರು ಶಿಲ್ಪಕಲಾ ತಜ್ಞರು ದೊಡ್ಡಗದ್ದವಳ್ಳಿಯಲ್ಲಿಯೇ ಒಂದು ವಾರ ವಾಸ್ತವ್ಯ ಹೂಡಿ, ದುರಸ್ತಿ ಕಾರ್ಯ ಕೈಗೊಂಡಿದ್ದರು. ಸದ್ಯ ದೇವಾಲಯದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಬಾಗಿಲು ರಿಪೇರಿ ನಡೆಯುತ್ತಿದೆ. 14 ದಿನಗಳ ಬಳಿಕ ಮಹಾಕಾಳಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.