ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಬದಲಾವಣೆ ಬಯಸಿದ್ದಾರೆ: ಸಚಿವ ಮಂಗಲಪಾಂಡೆ ಹೇಳಿಕೆ

Last Updated 9 ಮೇ 2018, 9:29 IST
ಅಕ್ಷರ ಗಾತ್ರ

ಕಡೂರು: ರಾಜ್ಯದ ಜನತೆ ಬದಲಾವಣೆಯನ್ನು ಬಯಸಿದ್ದಾರೆಂಬ ಅಂಶವನ್ನು ಗಮನಿಸಿದ್ದೇನೆ ಎಂದು ಬಿಹಾರದ ಆರೋಗ್ಯ ಸಚಿವ ಮಂಗಲಪಾಂಡೆ ಹೇಳಿದರು.

ಕಡೂರಿನ ಬಿಜೆಪಿ ಅಭ್ಯರ್ಥಿ ಬೆಳ್ಳಿಪ್ರಕಾಶ್ ನಿವಾಸದಲ್ಲಿ ಮಂಗಳವಾರ ಪಕ್ಷದ ಸ್ಥಳೀಯ ಪ್ರಣಾಳಿಕೆ ಬಿಡುಗಡೆ
ಗೊಳಿಸಿ ಅವರು ಮಾತನಾಡಿದರು.

ಮಧ್ಯಕರ್ನಾಟಕದ 5 ಜಿಲ್ಲೆಗಳ ಉಸ್ತುವಾರಿಯಾಗಿ ಇಲ್ಲಿ ಪ್ರವಾಸ ಮಾಡುತ್ತಿರುವ ಸಂದರ್ಭದಲ್ಲಿ ಜನರು ಬದಲಾವಣೆ ಬಯಸಿರುವುದು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕೆಂಬ ಆಸೆ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ. ಅಭಿವೃದ್ಧಿಗಾಗಿ ಬಿಜೆಪಿಗೆ ಜನತೆ ಮತ ನೀಡಲಿದ್ದಾರೆ.  ಕಾಂಗ್ರೆಸ್ ಸರ್ಕಾರ ಜನತೆಯನ್ನು ಜಾತಿ ಧರ್ಮಗಳ ನ್ನು ಒಡೆದು ಮತ ಗಳಿಸಲು ನೋಡುತ್ತಿದೆ. ಆದರೆ ಮೋದಿಯವರು ಅಭಿವೃದ್ಧಿಯ ವಿಚಾರದಲ್ಲಿ ಮತ ಕೇಳುತ್ತಿದ್ದಾರೆ. ಕಡೂರು ಸಮಗ್ರ ಅಭಿವೃದ್ಧಿಗಾಗಿ ದೂರದೃಷ್ಟಿಯ ಪ್ರಣಾಳಿಕೆ ಬಿಡುಗಡೆಯಾಗಿರುವುದು ಸಂತಸ ತಂದಿದೆಎಂದರು.

ಪ್ರಣಾಳಿಕೆಯಲ್ಲಿ: ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ತಾಲ್ಲೂಕಿನ ಎಲ್ಲ ಕೆರೆಗಳ ಪುನಶ್ಚೇತನ. ಶಾಶ್ವತ ನೀರಾವರಿ, ಮಧಗದ ಕೆರೆಗೆ ಹೆಬ್ಬೆ ಮೂಲಕ ನೀರು ಹರಿಸುವ ಯೋಜನೆ, ಕಡಿಮೆ ಬಡ್ಡಿಯಲ್ಲಿ ಕೃಷಿ ಸಾಲ, ಪಶುಸಾಕಣೆಗೆ ಉತ್ತೇಜನ, ಕಡೂರು ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ,. ಸೇರಿದಂತೆ 14 ಅಂಶಗಳ ಯೋಜನೆಗಳನ್ನು ವಿವರಿಸಲಾಗಿದೆ.

ಬೆಳ್ಳಿಪ್ರಕಾಶ್, ತಮಿಳುನಾಡಿನ ಮಾಜಿ ಸಂಸದ ನರಸಿಂಹನ್, ಸುನೀತಾಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT