15ನೇ ಹಣಕಾಸು ಯೋಜನೆಯಡಿ ಶೇಕಡಾ 25 ರಷ್ಟು ವಿದ್ಯುತ್ ಶುಲ್ಕ, ಶೇಕಡಾ 5ರಷ್ಟು ಅಂಗವಿಕಲರಿಗೆ, ಶೇಕಡಾ 25 ಅನುದಾನ ಘನ ತ್ಯಾಜ್ಯ ವಿಲೇವಾರಿ, ಶೇಕಡಾ 15 ಜಲಜೀವನ್ ಮಿಷನ್ಗೆ ಮೀಸಲಿಟ್ಟಿದ್ದಾರೆ. ಶೇ 10 ಅನುದಾನವನ್ನು ಇತರ ಕಾಮಗಾರಿಗೆ, ಶೇ 5 ಸೋಲಾರ್ ಅಳವಡಿಕೆಗೆ ಮೀಸಲಿಡಲಾಗಿದೆ. ಜೂನ್ನಲ್ಲಿಯೇ ಕ್ರಿಯಾ ಯೋಜನೆ ರೂಪಿಸಿ ಕೆಲವೆಡೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ, ಈಗ ಅದನ್ನೆಲ್ಲ ಪರಿಗಣಿಸದೆ ಖಾಸಗಿ ಕಂಪನಿಗೆ ಕೆಲಸ ನೀಡಬೇಕೆಂದು ಹೇಳುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.