<p><strong>ಹಳೇಬೀಡು:</strong> ಮತಿಘಟ್ಟ ಗ್ರಾಮದಲ್ಲಿ ಸೋಮವಾರ ಕೋಡಿಮಲ್ಲೇಶ್ವರ ಹಾಗೂ ವೀರಭದ್ರೇಶ್ವರ ಸ್ವಾಮಿಯವರ ತೆಪ್ಪೋತ್ಸವ ಹಾಗೂ ಕೆಂಡೋತ್ಸವ ಅಪಾರ ಜನಸ್ತೋಮದೊಂದಿಗೆ ಅದ್ದೂರಿಯಾಗಿ ನಡೆಯಿತು.</p>.<p>ಕೋಡಿಮಲ್ಲೇಶ್ವರ ದೇವಾಲಯದಲ್ಲಿ ವಾದ್ಯ ವೈಭವದೊಂದಿಗೆ ಪೂಜೆ ನಡೆದ ನಂತರ ಉತ್ಸವ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಕೆರೆ ದಡದಲ್ಲಿ ದೇವತೆಗಳಿಗೆ ಪೂಜೆ ನೆರವೇರಿಸಿದ ನಂತರ ಭಕ್ತರ ಜಯಘೋಷದೊಂದಿಗೆ ತೆಪ್ಪದಲ್ಲಿ ಉತ್ಸವ ಮೂರ್ತಿಗಳನ್ನು ಆರೋಹಣ ಮಾಡಲಾಯಿತು.</p>.<p>ಚೆಲುವರಾಯ ಸ್ವಾಮಿ, ದೊಡ್ಡಘಟ್ಟ ವೀರಾಂಜನೇಯ ಸ್ವಾಮಿ, ಆಲದಮರದಮ್ಮ ಹಾಗೂ ಪರಿವಾರ ದೇವತೆಗಳನ್ನು ತೆಪ್ಪದಲ್ಲಿ ಕೂರಿಸಲಾಗಿತ್ತು. ಗಂಟೆ, ಶಂಖನಾದದೊಂದಿಗೆ ಸುಶ್ರಾವ್ಯವಾಗಿ ಕೇಳಿ ಬರುತ್ತಿದ್ದ ಪುರೋಹಿತರ ವೇದ ಮಂತ್ರಘೋಷದೊಂದಿಗೆ ತೆಪ್ಪೋತ್ಸವ ಕೆರೆಯನ್ನು ಸುತ್ತುಹಾಕಿತು.</p>.<p>ಕೆರೆ ಮಧ್ಯದಲ್ಲಿ ತೆಪ್ಪ ನಿಲ್ಲಿಸಿ ಮಳೆ– ಬೆಳೆ ಸಮರ್ಪಕವಾಗಿ ಬರಲಿ, ಜಲ ಸಮೃದ್ದಿಯಾಗಲಿ. ಗ್ರಾಮಗಳಿಗೆ ಕಂಠಕಗಳು ಎದುರಾಗದೆ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿ ಪ್ರಧಾನ ಅರ್ಚಕ ಚಂದ್ರಶೇಖರ ಶಾಸ್ತ್ರಿ ಪುರೋಹಿತರ ತಂಡದೊಂದಿಗೆ ಪೂಜಾ ವಿಧಾನ ನಡೆಸಿದರು.</p>.<p>ಕೋಡಿಮಲ್ಲೇಶ್ವರ ದೇವಾಲಯ ಬಳಿಯ ಕೆರೆ ಕೋಡಿಯಿಂದ ಆರಂಭವಾದ ತೆಪ್ಪೋತ್ಸವ. ಮತಿಘಟ್ಟ ತಿರುವಿನ ಕೋಡಿಕೊಪ್ಪಲು ಬಳಿಯ ಮತ್ತೊಂದು ಕೋಡಿಯವರೆಗೆ 2 ಕಿ.ಮೀ. ದೂರ ಸಾಗಿತು. ದೇವತೆಗಳ ಜಲ ವಿಹಾರವನ್ನು ವಿವಿಧ ಊರಿನಿಂದ ಬಂದಿದ್ದ ಸಾವಿರಾರು ಜನರು ಕಣ್ತುಂಬಿಕೊಂಡರು.</p>.<p>ತೆಪ್ಪೋತ್ಸವ ನಡೆಯುತ್ತಿದ್ದಾಗ ಈಜು ಬಲ್ಲವರು ಕೆರೆ ನೀರಿಗೆ ಧುಮುಕಿ ವಿವಿಧ ಭಂಗಿಯಲ್ಲಿ ಈಜಾಡಿದರು. ತೆಪ್ಪೋತ್ಸವ ಕಣ್ತುಂಬಿಕೊಂಡ ಭಕ್ತರಿಗೆ ಈಜು ಪ್ರೀಯರ ನೀರಿನ ಆಟ ಮನಸ್ಸಿಗೆ ಮುದ ನೀಡಿತು.</p>.<p>ನಂತರ ರಥದಲ್ಲಿ ದೇವತೆಗಳನ್ನು ಆರೋಹಣ ಮಾಡಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮುಂಜಾನೆ ಕೋಡಿಮಲ್ಲೇಶ್ವರ ದೇವಾಲಯ ಆವರಣದಲ್ಲಿ ನಡೆದ ಕೆಂಡೋತ್ಸವದಲ್ಲಿಯೂ ಭಕ್ತರು ಜಮಾಯಿಸಿದ್ದರು. ನಸುಕಿನಿಂದಲೇ ದೇವಾಲಯದಲ್ಲಿ ಪೂಜೆ ನಡೆಯಿತು. ಜನಪದ ಕಲಾ ತಂಡಗಳು ಮೆರವಣಿಗೆಯ ವೈಭವ ಹೆಚ್ಚಿಸಿದವು.</p>.<p>2 ಕಿ.ಮೀ. ದೂರದ ಕೆರೆ ಏರಿಯ ರಸ್ತೆಯಲ್ಲಿ ಅಪಾರ ಸಂಖ್ಯೆಯ ಜನಸ್ತೋಮ ಸೇರಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನಗಳನ್ನು ಕೆರೆ ಏರಿಕೆಯಿಂದ ಆಚೆಗೆ ದಾಟಿಸಲು ಚಾಲಕರು ಹರಸಹಾಸಪಟ್ಟರು.</p>.<p>ಭಾನುವಾರ ನಡೆದ ಧಾರ್ಮಿಕ ಧ್ವಜಾರೋಹಣವನ್ನು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ನೆರವೇರಿಸಿದರು. ಪಿಡಿಒ ಕೃಷ್ಣಪ್ಪ ಪೂಜಾರಿ, ಮುಖಂಡರಾದ ನಾಗೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಲ್.ಈ. ಜಯಕುಮಾರ್, ಕುಮಾರ್, ಪ್ರಕಾಶ್ ಪಾಲ್ಗೊಂಡಿದ್ದರು.</p>.<div><blockquote>ಕೋಡಿಮಲ್ಲೇಶ್ವರ ಮತಿಘಟ್ಟಕ್ಕೆ ಮಾತ್ರ ಸಿಮೀತವಾಗಿಲ್ಲ. ನಾಡಿನ ವಿವಿಧೆಡೆ ಭಕ್ತರು ಇರುವುದರಿಂದ ಜಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಜಮಾಯಿಸುತ್ತಾರೆ. </blockquote><span class="attribution">ನಾಗೇಗೌಡ ಬಗರ್ ಹುಕುಂ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳೇಬೀಡು:</strong> ಮತಿಘಟ್ಟ ಗ್ರಾಮದಲ್ಲಿ ಸೋಮವಾರ ಕೋಡಿಮಲ್ಲೇಶ್ವರ ಹಾಗೂ ವೀರಭದ್ರೇಶ್ವರ ಸ್ವಾಮಿಯವರ ತೆಪ್ಪೋತ್ಸವ ಹಾಗೂ ಕೆಂಡೋತ್ಸವ ಅಪಾರ ಜನಸ್ತೋಮದೊಂದಿಗೆ ಅದ್ದೂರಿಯಾಗಿ ನಡೆಯಿತು.</p>.<p>ಕೋಡಿಮಲ್ಲೇಶ್ವರ ದೇವಾಲಯದಲ್ಲಿ ವಾದ್ಯ ವೈಭವದೊಂದಿಗೆ ಪೂಜೆ ನಡೆದ ನಂತರ ಉತ್ಸವ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಕೆರೆ ದಡದಲ್ಲಿ ದೇವತೆಗಳಿಗೆ ಪೂಜೆ ನೆರವೇರಿಸಿದ ನಂತರ ಭಕ್ತರ ಜಯಘೋಷದೊಂದಿಗೆ ತೆಪ್ಪದಲ್ಲಿ ಉತ್ಸವ ಮೂರ್ತಿಗಳನ್ನು ಆರೋಹಣ ಮಾಡಲಾಯಿತು.</p>.<p>ಚೆಲುವರಾಯ ಸ್ವಾಮಿ, ದೊಡ್ಡಘಟ್ಟ ವೀರಾಂಜನೇಯ ಸ್ವಾಮಿ, ಆಲದಮರದಮ್ಮ ಹಾಗೂ ಪರಿವಾರ ದೇವತೆಗಳನ್ನು ತೆಪ್ಪದಲ್ಲಿ ಕೂರಿಸಲಾಗಿತ್ತು. ಗಂಟೆ, ಶಂಖನಾದದೊಂದಿಗೆ ಸುಶ್ರಾವ್ಯವಾಗಿ ಕೇಳಿ ಬರುತ್ತಿದ್ದ ಪುರೋಹಿತರ ವೇದ ಮಂತ್ರಘೋಷದೊಂದಿಗೆ ತೆಪ್ಪೋತ್ಸವ ಕೆರೆಯನ್ನು ಸುತ್ತುಹಾಕಿತು.</p>.<p>ಕೆರೆ ಮಧ್ಯದಲ್ಲಿ ತೆಪ್ಪ ನಿಲ್ಲಿಸಿ ಮಳೆ– ಬೆಳೆ ಸಮರ್ಪಕವಾಗಿ ಬರಲಿ, ಜಲ ಸಮೃದ್ದಿಯಾಗಲಿ. ಗ್ರಾಮಗಳಿಗೆ ಕಂಠಕಗಳು ಎದುರಾಗದೆ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿ ಪ್ರಧಾನ ಅರ್ಚಕ ಚಂದ್ರಶೇಖರ ಶಾಸ್ತ್ರಿ ಪುರೋಹಿತರ ತಂಡದೊಂದಿಗೆ ಪೂಜಾ ವಿಧಾನ ನಡೆಸಿದರು.</p>.<p>ಕೋಡಿಮಲ್ಲೇಶ್ವರ ದೇವಾಲಯ ಬಳಿಯ ಕೆರೆ ಕೋಡಿಯಿಂದ ಆರಂಭವಾದ ತೆಪ್ಪೋತ್ಸವ. ಮತಿಘಟ್ಟ ತಿರುವಿನ ಕೋಡಿಕೊಪ್ಪಲು ಬಳಿಯ ಮತ್ತೊಂದು ಕೋಡಿಯವರೆಗೆ 2 ಕಿ.ಮೀ. ದೂರ ಸಾಗಿತು. ದೇವತೆಗಳ ಜಲ ವಿಹಾರವನ್ನು ವಿವಿಧ ಊರಿನಿಂದ ಬಂದಿದ್ದ ಸಾವಿರಾರು ಜನರು ಕಣ್ತುಂಬಿಕೊಂಡರು.</p>.<p>ತೆಪ್ಪೋತ್ಸವ ನಡೆಯುತ್ತಿದ್ದಾಗ ಈಜು ಬಲ್ಲವರು ಕೆರೆ ನೀರಿಗೆ ಧುಮುಕಿ ವಿವಿಧ ಭಂಗಿಯಲ್ಲಿ ಈಜಾಡಿದರು. ತೆಪ್ಪೋತ್ಸವ ಕಣ್ತುಂಬಿಕೊಂಡ ಭಕ್ತರಿಗೆ ಈಜು ಪ್ರೀಯರ ನೀರಿನ ಆಟ ಮನಸ್ಸಿಗೆ ಮುದ ನೀಡಿತು.</p>.<p>ನಂತರ ರಥದಲ್ಲಿ ದೇವತೆಗಳನ್ನು ಆರೋಹಣ ಮಾಡಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮುಂಜಾನೆ ಕೋಡಿಮಲ್ಲೇಶ್ವರ ದೇವಾಲಯ ಆವರಣದಲ್ಲಿ ನಡೆದ ಕೆಂಡೋತ್ಸವದಲ್ಲಿಯೂ ಭಕ್ತರು ಜಮಾಯಿಸಿದ್ದರು. ನಸುಕಿನಿಂದಲೇ ದೇವಾಲಯದಲ್ಲಿ ಪೂಜೆ ನಡೆಯಿತು. ಜನಪದ ಕಲಾ ತಂಡಗಳು ಮೆರವಣಿಗೆಯ ವೈಭವ ಹೆಚ್ಚಿಸಿದವು.</p>.<p>2 ಕಿ.ಮೀ. ದೂರದ ಕೆರೆ ಏರಿಯ ರಸ್ತೆಯಲ್ಲಿ ಅಪಾರ ಸಂಖ್ಯೆಯ ಜನಸ್ತೋಮ ಸೇರಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನಗಳನ್ನು ಕೆರೆ ಏರಿಕೆಯಿಂದ ಆಚೆಗೆ ದಾಟಿಸಲು ಚಾಲಕರು ಹರಸಹಾಸಪಟ್ಟರು.</p>.<p>ಭಾನುವಾರ ನಡೆದ ಧಾರ್ಮಿಕ ಧ್ವಜಾರೋಹಣವನ್ನು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ನೆರವೇರಿಸಿದರು. ಪಿಡಿಒ ಕೃಷ್ಣಪ್ಪ ಪೂಜಾರಿ, ಮುಖಂಡರಾದ ನಾಗೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಲ್.ಈ. ಜಯಕುಮಾರ್, ಕುಮಾರ್, ಪ್ರಕಾಶ್ ಪಾಲ್ಗೊಂಡಿದ್ದರು.</p>.<div><blockquote>ಕೋಡಿಮಲ್ಲೇಶ್ವರ ಮತಿಘಟ್ಟಕ್ಕೆ ಮಾತ್ರ ಸಿಮೀತವಾಗಿಲ್ಲ. ನಾಡಿನ ವಿವಿಧೆಡೆ ಭಕ್ತರು ಇರುವುದರಿಂದ ಜಾತ್ರೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಜಮಾಯಿಸುತ್ತಾರೆ. </blockquote><span class="attribution">ನಾಗೇಗೌಡ ಬಗರ್ ಹುಕುಂ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>