‘ಹಲ್ಮಿಡಿ ಉತ್ಸವದ ಅಂಗವಾಗಿ ನ.23 ರಂದು ಬೆಳಿಗ್ಗೆ ಶಾಸನದ ಪ್ರತಿಕೃತಿಯ ಮೆರವಣಿಗೆ, ಕಾರ್ಯಕ್ರಮದ ಉದ್ಘಾಟನೆ, ಹಲ್ಮಿಡಿ ಶಾಸನದ ಕುರಿತು ವಿಚಾರಗೋಷ್ಠಿ ಮತ್ತು ಸಂಜೆ ಕೃಷ್ಣೇಗೌಡ ಅವರಿಂದ ಹಾಸ್ಯ ಕಾರ್ಯಕ್ರಮ, ಸ್ವಾತಿ ಭಾರದ್ವಾಜ್ ಅವರಿಂದ ಭರತನಾಟ್ಯ ಮತ್ತು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಹಲ್ಮಿಡಿ ಉತ್ಸವದ ಮೂಲಕ ಸರ್ಕಾರದ ಗಮನ ಸೆಳೆಯುವ ಉದ್ದೇಶ ಹೊಂದಲಾಗಿದೆ’ ಎಂದರು.