ಮೂಡಿಗೆರೆ–ಸಕಲೇಶಪುರ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಗ್ರಾಮದ ಎಚ್.ಸಿ. ಹರೀಶ್ ಅವರ ತೋಟದ ಗೇಟ್ನ ಸಲಾಕೆಗೆ ಜಿಂಕೆಯ ತೊಡೆ ಭಾಗದ ಚರ್ಮ ಚುಚ್ಚಿಕೊಂಡು ಒದ್ದಾಡುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಅದನ್ನು ಗ್ರಾಮಸ್ಥರು ನೋಡಿ ಬಿಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಕತ್ತಿಯಿಂದ ಚರ್ಮವನ್ನು ಕೊಯ್ದ ಕೂಡಲೇ ಕ್ಷಣಾರ್ಧದಲ್ಲಿ ಅಲಿಂದ ತೋಟದೊಳಗೆ ಓಡಿಹೋಯಿತು. ಈ ವಿಡಿಯೊ ಈ ಭಾಗದಲ್ಲಿ ಹರಿದಾಡುತ್ತಿದೆ.