ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ಅಧಿದೇವತೆ ಹಾಸನಾಂಬೆ ಗರ್ಭಗುಡಿ ಬಾಗಿಲನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಮುಚ್ಚಲಾಯಿತು.
ನ.1 ರಿಂದ 9ರವರೆಗೆ ದೇಗುಲದ ಬಾಗಿಲು ತೆರೆದು ದೇವಿ ದರ್ಶನ ಮಾಡಲು ಅನುವು ಮಾಡಿಕೊಡಲಾಗಿತ್ತು. ಬಲಿಪಾಡ್ಯಮಿ ಮಾರನೇ ದಿನವಾದ ಶುಕ್ರವಾರ ಮಧ್ಯಾಹ್ನ 1.18 ಕ್ಕೆ ದೇವಿ ಗರ್ಭ ಗುಡಿ ಮುಚ್ಚುತ್ತಿದ್ದಂತೆಯೇ ನೆರೆದಿದ್ದ ಭಕ್ತರು ಜಯಘೋಷ ಮೊಳಗಿಸಿದರು.
ಮುಂದಿನ ವರ್ಷ ಅ. 17 ರಿಂದ 29 ರ ವರೆಗೆ ಮತ್ತೆ ಹಾಸನಾಂಬೆ ಭಕ್ತರಿಗೆ ಗೋಚರಿಸಲಿದ್ದಾಳೆ. ಜಿಲ್ಲಾಡಳಿತ ಮಾಹಿತಿ ಪ್ರಕಾರ ಈ ವರ್ಷ ಅಂದಾಜು ಮೂರು ಲಕ್ಷ ಭಕ್ತರು ದೇವಿ ದರ್ಶನ ಪಡೆದರು.
ಸಂಪ್ರದಾಯ ಪ್ರಕಾರ ದೇವಿ ಸನ್ನಿಧಿಯಲ್ಲಿ ಹೂವು, ನೈವೇದ್ಯ ಇಟ್ಟು ಹಣತೆ ಹಚ್ಚಲಾಯಿತು. ಮುಜರಾಯಿ ಇಲಾಖೆಯ ಬೀಗ ಹಾಕಿ ಸೀಲ್ ಒತ್ತಲಾಯಿತು.