ಬಳಿಕ ಮಾತನಾಡಿದ ಕುಮಾರಸ್ವಾಮಿ, ‘ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಕುಟುಂಬ ಸದಸ್ಯರೊಂದಿಗೆ ದೇವಿ ದರ್ಶನ ಪಡೆದಿದ್ದೇನೆ. ಇತ್ತೀಚೆಗೆ ಕೆಲವು ಸಂಘಟನೆಗಳೂ ದೇವಿಯ ನಂಬಿಕೆ ಬಗ್ಗೆ ಅಪಸ್ವರ ಎತ್ತಿವೆ. ಆದರೆ, ಪವಾಡ ಶಕ್ತಿ ಇಂದು, ನಿನ್ನೆಯದಲ್ಲ. ದೇವರ ಮೇಲಿನ ನಂಬಿಕೆ-ವಿಶ್ವಾಸವೇ ಸಾರ್ವಜನಿಕ ಜೀವನ ನಡೆಯಲು ಕಾರಣ. ಹೀಗಾಗಿ ಹಾಸನಾಂಬೆ ನಂಬಿಕೆ ಬಗ್ಗೆ ಯಾವುದೇ ಸಂಶಯ ಬೇಡ. ಅಪ ಪ್ರಚಾರವೂ ಬೇಡ ಎನ್ನುವುದು ವೈಯಕ್ತಿಕ ಅಭಿಪ್ರಾಯ. ದೇವರ ನಂಬಿಕೆಗೆ ಧಕ್ಕೆ ಉಂಟು ಮಾಡುವುದು ಬೇಡ’ ಎಂದು ಮನವಿ ಮಾಡಿದರು.