ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಮಿನಾಶಕ ಸೇವಿಸಿ ನವಿಲು ಅಸ್ವಸ್ಥ

Last Updated 6 ಜೂನ್ 2019, 16:10 IST
ಅಕ್ಷರ ಗಾತ್ರ

ಹಾಸನ: ರೈತರೊಬ್ಬರು ಜೋಳಕ್ಕೆ ಇರಿಸಿದ್ದ ಕ್ರಿಮಿನಾಶಕ ಸೇವಿಸಿ ನವಿಲು ನಿತ್ರಾಣವಾಗಿರುವ ಘಟನೆ ತಾಲ್ಲೂಕಿನ ಚಿಗಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಂಜೇಗೌಡ ಎಂಬುವರು ಜೋಳ ಬಿತ್ತನೆ ಮಾಡಿದ್ದರು. ಜೋಳದ ಕಾಳುಗಳನ್ನು ಪ್ರಾಣಿ, ಪಕ್ಷಿಗಳು ಹಾಳು ಮಾಡದಂತೆ ಔಷಧ ಇರಿಸಿದ್ದರು. ಆಹಾರ ಅರಸಿ ಬಂದ ನವಿಲು ಆಕಸ್ಮಿಕವಾಗಿ ತಿಂದಿದ್ದರಿಂದ ನಿತ್ರಾಣಗೊಂಡಿದೆ.

ಗ್ರಾಮಸ್ಥರು ನವಿಲನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಪಟ್ಟರು. ಅಷ್ಟರಲ್ಲಿ ಅದು ಕುರುಚುಲು ಗಿಡದ ಮಧ್ಯೆ ತಪ್ಪಿಸಿಕೊಂಡು ಹೋಗಿದೆ.
ಹಾಸನ ತಾಲ್ಲೂಕಿನ ಸುತ್ತಮುತ್ತ ಜೋಳವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಜೋಳ ತಿನ್ನಲು ನವಿಲುಗಳ ಹಿಂಡು ಬರುತ್ತವೆ. ಇದನ್ನು ನಿಯಂತ್ರಿಸಲು ರೈತರು ಈ ರೀತಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT