<p><strong>ಹಾಸನ:</strong> ‘ಜಿಲ್ಲೆಯ ಅರಸೀಕೆರೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದಾದ ಅಗ್ನಿ ಅವಘಡದ ಸಂತ್ರಸ್ತ ಗ್ರಾಹಕರಿಗೆ ವಿಮೆ ಕಂಪನಿ ಹಾಗೂ ಅನಿಲ ಕಂಪನಿಗಳು ₹29 ಲಕ್ಷ ಪರಿಹಾರ ನೀಡಬೇಕು’ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.</p>.<p>ಗ್ರಾಹಕ ಚನ್ನಬಸಪ್ಪ ಅವರ ಮನೆಯಲ್ಲಿ 2023ರ ಅ. 6ರಂದು ಭಾರತ್ ಗ್ಯಾಸ್ ಏಜೆನ್ಸಿಯ ಸಿಲಿಂಡರ್ ಸ್ಫೋಟಿಸಿ ಅವರ ಪತ್ನಿಗೆ ಗಾಯವಾಗಿತ್ತು. ಸಹೋದರ ಎಸ್.ಸಿ.ರಾಮಣ್ಣ ಅವರ ಮನೆಗೂ ಬೆಂಕಿ ವ್ಯಾಪಿಸಿತ್ತು. 15 ಸಾವಿರ ತೆಂಗಿನಕಾಯಿಗಳು, 3 ಅಲ್ಮೇರಾ, ಟಿ.ವಿ., ರೆಫ್ರಿಜಿರೇಟರ್, ಪೀಠೋಪಕರಣ, ಪಾತ್ರೆ, 105 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ, ₹1 ಲಕ್ಷ ನಗದು ಬೆಂಕಿಗೆ ಆಹುತಿಯಾಗಿ, ಮನೆ ಗೋಡೆಗಳು ಬಿರುಕುಬಿಟ್ಟಿದ್ದವು.</p>.<p>‘ಗ್ಯಾಸ್ ಏಜೆನ್ಸಿ ಪೂರೈಸಿರುವ ಕಳಪೆ ಸಿಲಿಂಡರ್, ರೆಗ್ಯುಲೇಟರ್ ಮತ್ತು ಪೈಪ್ನಿಂದ ಅವಘಡ ಸಂಭವಿಸಿದೆ’ ಎಂದು ರಾಮಣ್ಣ ಅವರು ಬಾಣಾವಾರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ‘ಅವಘಡದಲ್ಲಿ ಅಂದಾಜು ₹29 ಲಕ್ಷ ನಷ್ಟವಾಗಿದೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ವರದಿ ನೀಡಿದ್ದರು.</p>.<p>ಸೇವಾ ನ್ಯೂನತೆಯಿಂದ ಆದ ಅವಘಡಕ್ಕೆ ಪರಿಹಾರ ನೀಡದ ಗ್ಯಾಸ್ ಏಜೆನ್ಸಿ, ವಿಮೆ ಕಂಪನಿ ಹಾಗೂ ಗ್ಯಾಸ್ ಕಂಪನಿಯಿಂದ ₹49,75,000 ಪರಿಹಾರ ಕೊಡಿಸುವಂತೆ ಕೋರಿ ರಾಮಣ್ಣ ಅವರು 2025 ರ ಮೇ 27 ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.</p>.<p>ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಚಂಚಲಾ ಸಿ.ಎಂ. ಹಾಗೂ ಸದಸ್ಯೆ ಅನುಪಮಾ ಆರ್. ಅವರನ್ನು ಒಳಗೊಂಡ ಪೀಠವು, ಎಸ್.ಬಿ.ಐ. ಜನರಲ್ ಇನ್ಶುರೆನ್ಸ್ ಕಂಪನಿಯು ₹2 ಲಕ್ಷ, ಮತ್ತು ಮೆ. ಮಂಗಳೂರು ಎಲ್.ಪಿ.ಜಿ. ಟೆರಿಟೋರಿಟಿ ಸಂಸ್ಥೆಯು ₹27 ಲಕ್ಷ ಪರಿಹಾರವನ್ನು 2023ರ ಅಕ್ಟೋಬರ್ 6 ರಿಂದ ಪೂರ್ವಾನ್ವಯ ಆಗುವಂತೆ ಶೇ 10ರ ಬಡ್ಡಿಯೊಂದಿಗೆ ನೀಡಬೇಕು’ ಎಂದು ಆದೇಶಿಸಿದೆ.</p>.<p>ಸೇವಾ ನ್ಯೂನತೆಗಾಗಿ ₹5 ಸಾವಿರ, ಮಾನಸಿಕ ಹಿಂಸೆಗಾಗಿ ₹5 ಸಾವಿರ, ಶುಲ್ಕ₹5 ಸಾವಿರ ಭರಿಸಬೇಕು. ತಪ್ಪಿದರೆ ಈ ಮೊತ್ತದ ಮೇಲೆ ಶೇ 10 ರ ಬಡ್ಡಿಯೊಂದಿಗೆ ಹಣ ಪಾವತಿಸಬೇಕು ಎಂದು ಏಪ್ರಿಲ್ 22ರಂದು ಆದೇಶಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ‘ಜಿಲ್ಲೆಯ ಅರಸೀಕೆರೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದಾದ ಅಗ್ನಿ ಅವಘಡದ ಸಂತ್ರಸ್ತ ಗ್ರಾಹಕರಿಗೆ ವಿಮೆ ಕಂಪನಿ ಹಾಗೂ ಅನಿಲ ಕಂಪನಿಗಳು ₹29 ಲಕ್ಷ ಪರಿಹಾರ ನೀಡಬೇಕು’ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.</p>.<p>ಗ್ರಾಹಕ ಚನ್ನಬಸಪ್ಪ ಅವರ ಮನೆಯಲ್ಲಿ 2023ರ ಅ. 6ರಂದು ಭಾರತ್ ಗ್ಯಾಸ್ ಏಜೆನ್ಸಿಯ ಸಿಲಿಂಡರ್ ಸ್ಫೋಟಿಸಿ ಅವರ ಪತ್ನಿಗೆ ಗಾಯವಾಗಿತ್ತು. ಸಹೋದರ ಎಸ್.ಸಿ.ರಾಮಣ್ಣ ಅವರ ಮನೆಗೂ ಬೆಂಕಿ ವ್ಯಾಪಿಸಿತ್ತು. 15 ಸಾವಿರ ತೆಂಗಿನಕಾಯಿಗಳು, 3 ಅಲ್ಮೇರಾ, ಟಿ.ವಿ., ರೆಫ್ರಿಜಿರೇಟರ್, ಪೀಠೋಪಕರಣ, ಪಾತ್ರೆ, 105 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ, ₹1 ಲಕ್ಷ ನಗದು ಬೆಂಕಿಗೆ ಆಹುತಿಯಾಗಿ, ಮನೆ ಗೋಡೆಗಳು ಬಿರುಕುಬಿಟ್ಟಿದ್ದವು.</p>.<p>‘ಗ್ಯಾಸ್ ಏಜೆನ್ಸಿ ಪೂರೈಸಿರುವ ಕಳಪೆ ಸಿಲಿಂಡರ್, ರೆಗ್ಯುಲೇಟರ್ ಮತ್ತು ಪೈಪ್ನಿಂದ ಅವಘಡ ಸಂಭವಿಸಿದೆ’ ಎಂದು ರಾಮಣ್ಣ ಅವರು ಬಾಣಾವಾರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ‘ಅವಘಡದಲ್ಲಿ ಅಂದಾಜು ₹29 ಲಕ್ಷ ನಷ್ಟವಾಗಿದೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ವರದಿ ನೀಡಿದ್ದರು.</p>.<p>ಸೇವಾ ನ್ಯೂನತೆಯಿಂದ ಆದ ಅವಘಡಕ್ಕೆ ಪರಿಹಾರ ನೀಡದ ಗ್ಯಾಸ್ ಏಜೆನ್ಸಿ, ವಿಮೆ ಕಂಪನಿ ಹಾಗೂ ಗ್ಯಾಸ್ ಕಂಪನಿಯಿಂದ ₹49,75,000 ಪರಿಹಾರ ಕೊಡಿಸುವಂತೆ ಕೋರಿ ರಾಮಣ್ಣ ಅವರು 2025 ರ ಮೇ 27 ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿದ್ದರು.</p>.<p>ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಚಂಚಲಾ ಸಿ.ಎಂ. ಹಾಗೂ ಸದಸ್ಯೆ ಅನುಪಮಾ ಆರ್. ಅವರನ್ನು ಒಳಗೊಂಡ ಪೀಠವು, ಎಸ್.ಬಿ.ಐ. ಜನರಲ್ ಇನ್ಶುರೆನ್ಸ್ ಕಂಪನಿಯು ₹2 ಲಕ್ಷ, ಮತ್ತು ಮೆ. ಮಂಗಳೂರು ಎಲ್.ಪಿ.ಜಿ. ಟೆರಿಟೋರಿಟಿ ಸಂಸ್ಥೆಯು ₹27 ಲಕ್ಷ ಪರಿಹಾರವನ್ನು 2023ರ ಅಕ್ಟೋಬರ್ 6 ರಿಂದ ಪೂರ್ವಾನ್ವಯ ಆಗುವಂತೆ ಶೇ 10ರ ಬಡ್ಡಿಯೊಂದಿಗೆ ನೀಡಬೇಕು’ ಎಂದು ಆದೇಶಿಸಿದೆ.</p>.<p>ಸೇವಾ ನ್ಯೂನತೆಗಾಗಿ ₹5 ಸಾವಿರ, ಮಾನಸಿಕ ಹಿಂಸೆಗಾಗಿ ₹5 ಸಾವಿರ, ಶುಲ್ಕ₹5 ಸಾವಿರ ಭರಿಸಬೇಕು. ತಪ್ಪಿದರೆ ಈ ಮೊತ್ತದ ಮೇಲೆ ಶೇ 10 ರ ಬಡ್ಡಿಯೊಂದಿಗೆ ಹಣ ಪಾವತಿಸಬೇಕು ಎಂದು ಏಪ್ರಿಲ್ 22ರಂದು ಆದೇಶಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>