<p><strong>ಹಾಸನ:</strong> ನಗರದ ಬೂವನಹಳ್ಳಿ, ಗೇಕರವಳ್ಳಿ, ಸಮುದ್ರವಳ್ಳಿ ಹಾಗೂ ಕೆಂಚಟ್ಟಹಳ್ಳಿ ವ್ಯಾಪ್ತಿಯಲ್ಲಿ ಹುಡಾ ನಿರ್ಮಾಣ ಮಾಡುತ್ತಿರುವ ಬಿಜಿಎಸ್ಕೆ ಬಡಾವಣೆಯಲ್ಲಿ ಜೂನ್ 18ರಂದು ನಿವೇಶನ ಹಂಚಿಕೆಗೆ ರೈತರು ಆಕ್ಷೇಪ ವ್ಯಕ್ತಪಡಿಸಿದರು.</p>.<p>ಬಡಾವಣೆಗೆ ಭೂಮಿ ನೀಡಿದ ಹಲವಾರು ರೈತರು ಸೋಮವಾರ ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ ಅವರನ್ನು ಭೇಟಿ ಮಾಡಿ, ಭೂಮಿ ನೀಡಿದ ನಮ್ಮೊಂದಿಗೆ ಯಾವುದೇ ಚರ್ಚೆ ಮಾಡಿಲ್ಲ. ಮೊದಲು ನಮಗೆ ನಿವೇಶನ ನೀಡದೇ ಸಾರ್ವಜನಿಕರಿಗೆ ಹಂಚಲು ದಿನಾಂಕ ಘೋಷಣೆ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.</p>.<p>ನಮ್ಮೊಂದಿಗೆ ಮಾತುಕತೆ ನಡೆಸದೇ, ಜಮೀನು ಕೊಟ್ಟವರಿಗೆ ಮೊದಲು ನಿವೇಶನ ಕೊಡದೇ ಜನರಿಗೆ ಕೊಡುವುದು ಸರಿಯಲ್ಲ. ನಮ್ಮ ಸಮಕ್ಷಮದಲ್ಲೇ ಮತ್ತೊಮ್ಮೆ ದಿನಾಂಕ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.</p>.<p>ಇನ್ನೂ ಸುಮಾರು 80 ಎಕರೆ ಭೂಸ್ವಾಧೀನ ಆಗಿಲ್ಲ. ಮೂಲಸೌಕರ್ಯ ಕಾಮಗಾರಿಗಳು ಸಂಪೂರ್ಣ ಮುಗಿದಿಲ್ಲ. ಆರು ತಿಂಗಳು ತಡವಾದರೂ ಪರವಾಗಿಲ್ಲ. ಕೃಷ್ಣನಗರದಲ್ಲಿ ಈಗಲೂ ಅನೇಕ ಸಮಸ್ಯೆಗಳು ಬಗೆಹರಿದಿಲ್ಲ. ಈ ಬಡಾವಣೆಯನ್ನೂ ಹಾಗೆ ಮಾಡಬೇಡಿ ಎಂದು ಎಚ್ಚರಿಸಿದರು.</p>.<p>ಇನ್ನೂ ಕೆಲವರು ನಮಗೆ ಕಾರ್ನರ್ ಸೈಟ್ ಕೊಡಬೇಕು ಎಂದು ಆಗ್ರಹಿಸಿದರು. ಬಿಜಿಎಸ್ಕೆ ಬಡಾವಣೆಯಲ್ಲಿ ಮೂಲಸೌಕರ್ಯಗಳನ್ನು ಪೂರ್ಣಗೊಳಿಸಿದ ಬಳಿಕವೇ ನಿವೇಶನ ಹಂಚಿಕೆ ಮಾಡಬೇಕು. ಹಂಚಿಕೆ ತಡವಾದರೂ ಪರವಾಗಿಲ್ಲ, ಆದರೆ ಜನರು ಮತ್ತೆ ಸಮಸ್ಯೆ ಎದುರಿಸಬಾರದು ಎಂದು ಒತ್ತಾಯಿಸಿದರು.</p>.<p>ಇದಕ್ಕೆ ಉತ್ತರಿಸಿದ ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ಜೂನ್ 18ರಂದು ನಿವೇಶನ ಹಂಚಿಕೆ ನಡೆಯುವುದಿಲ್ಲ. ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವರು ಯಾವ ದಿನಾಂಕ ಕೊಡುತ್ತಾರೋ ಅಂದು ವಿತರಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.</p>.<p>ನಾವು ರೈತರನ್ನು ಕಡೆಗಣಿಸಿಲ್ಲ. ರೈತರಿಗೇ ಮೊದಲ ಆದ್ಯತೆ. ರೈತರ ಊರುಗಳಿಗೆ ಬಂದು ನಿಮ್ಮ ಸಮಸ್ಯೆಗಳನ್ನು ಆಲಿಸಿ, ಪರಸ್ಪರ ಚರ್ಚಿಸಿ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.</p>.<p>ಜೂನ್ 2ರಂದು ಪ್ರತಿಯೊಂದು ಹಳ್ಳಿಗೂ ಬರುತ್ತೇವೆ. ಅಲ್ಲೇ ಚರ್ಚೆ ಮಾಡುತ್ತೇವೆ. ರೈತರನ್ನು ಕೇಳದೇ ಮುಂದುವರಿಯುವುದಿಲ್ಲ. ಈಗಾಗಲೇ ಬೂವನಹಳ್ಳಿ ಬಳಿ ಒಂದು ಸ್ಮಶಾನ ಮಾಡಿದ್ದೇವೆ. ಬೇಕಿದ್ದರೆ ಮತ್ತೊಂದು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.</p>.<p>ಮೂಲ ಸೌಕರ್ಯಗಳನ್ನು ಹಂತ ಹಂತವಾಗಿ ಮಾಡುತ್ತೇವೆ. ರೈತರು ಕೇಳುತ್ತಿರುವುದು ಸರಿ ಇದೆ. ಕಂಪನಿಯವರು ಬೇಗ ಕೆಲಸ ಮಾಡಲಿ ಎಂದು ದಿನಾಂಕ ಘೋಷಣೆ ಮಾಡಿದ್ದೇವೆ. ದಿನಾಂಕದಲ್ಲಿ ವ್ಯತ್ಯಾಸ ಆಗಬಹುದು. ರೈತರಿಗೆ ಕಾರ್ನರ್ ಸೈಟ್ ನೀಡುವ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-36-653863671</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ನಗರದ ಬೂವನಹಳ್ಳಿ, ಗೇಕರವಳ್ಳಿ, ಸಮುದ್ರವಳ್ಳಿ ಹಾಗೂ ಕೆಂಚಟ್ಟಹಳ್ಳಿ ವ್ಯಾಪ್ತಿಯಲ್ಲಿ ಹುಡಾ ನಿರ್ಮಾಣ ಮಾಡುತ್ತಿರುವ ಬಿಜಿಎಸ್ಕೆ ಬಡಾವಣೆಯಲ್ಲಿ ಜೂನ್ 18ರಂದು ನಿವೇಶನ ಹಂಚಿಕೆಗೆ ರೈತರು ಆಕ್ಷೇಪ ವ್ಯಕ್ತಪಡಿಸಿದರು.</p>.<p>ಬಡಾವಣೆಗೆ ಭೂಮಿ ನೀಡಿದ ಹಲವಾರು ರೈತರು ಸೋಮವಾರ ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ ಅವರನ್ನು ಭೇಟಿ ಮಾಡಿ, ಭೂಮಿ ನೀಡಿದ ನಮ್ಮೊಂದಿಗೆ ಯಾವುದೇ ಚರ್ಚೆ ಮಾಡಿಲ್ಲ. ಮೊದಲು ನಮಗೆ ನಿವೇಶನ ನೀಡದೇ ಸಾರ್ವಜನಿಕರಿಗೆ ಹಂಚಲು ದಿನಾಂಕ ಘೋಷಣೆ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.</p>.<p>ನಮ್ಮೊಂದಿಗೆ ಮಾತುಕತೆ ನಡೆಸದೇ, ಜಮೀನು ಕೊಟ್ಟವರಿಗೆ ಮೊದಲು ನಿವೇಶನ ಕೊಡದೇ ಜನರಿಗೆ ಕೊಡುವುದು ಸರಿಯಲ್ಲ. ನಮ್ಮ ಸಮಕ್ಷಮದಲ್ಲೇ ಮತ್ತೊಮ್ಮೆ ದಿನಾಂಕ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.</p>.<p>ಇನ್ನೂ ಸುಮಾರು 80 ಎಕರೆ ಭೂಸ್ವಾಧೀನ ಆಗಿಲ್ಲ. ಮೂಲಸೌಕರ್ಯ ಕಾಮಗಾರಿಗಳು ಸಂಪೂರ್ಣ ಮುಗಿದಿಲ್ಲ. ಆರು ತಿಂಗಳು ತಡವಾದರೂ ಪರವಾಗಿಲ್ಲ. ಕೃಷ್ಣನಗರದಲ್ಲಿ ಈಗಲೂ ಅನೇಕ ಸಮಸ್ಯೆಗಳು ಬಗೆಹರಿದಿಲ್ಲ. ಈ ಬಡಾವಣೆಯನ್ನೂ ಹಾಗೆ ಮಾಡಬೇಡಿ ಎಂದು ಎಚ್ಚರಿಸಿದರು.</p>.<p>ಇನ್ನೂ ಕೆಲವರು ನಮಗೆ ಕಾರ್ನರ್ ಸೈಟ್ ಕೊಡಬೇಕು ಎಂದು ಆಗ್ರಹಿಸಿದರು. ಬಿಜಿಎಸ್ಕೆ ಬಡಾವಣೆಯಲ್ಲಿ ಮೂಲಸೌಕರ್ಯಗಳನ್ನು ಪೂರ್ಣಗೊಳಿಸಿದ ಬಳಿಕವೇ ನಿವೇಶನ ಹಂಚಿಕೆ ಮಾಡಬೇಕು. ಹಂಚಿಕೆ ತಡವಾದರೂ ಪರವಾಗಿಲ್ಲ, ಆದರೆ ಜನರು ಮತ್ತೆ ಸಮಸ್ಯೆ ಎದುರಿಸಬಾರದು ಎಂದು ಒತ್ತಾಯಿಸಿದರು.</p>.<p>ಇದಕ್ಕೆ ಉತ್ತರಿಸಿದ ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ಜೂನ್ 18ರಂದು ನಿವೇಶನ ಹಂಚಿಕೆ ನಡೆಯುವುದಿಲ್ಲ. ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಸಚಿವರು ಯಾವ ದಿನಾಂಕ ಕೊಡುತ್ತಾರೋ ಅಂದು ವಿತರಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.</p>.<p>ನಾವು ರೈತರನ್ನು ಕಡೆಗಣಿಸಿಲ್ಲ. ರೈತರಿಗೇ ಮೊದಲ ಆದ್ಯತೆ. ರೈತರ ಊರುಗಳಿಗೆ ಬಂದು ನಿಮ್ಮ ಸಮಸ್ಯೆಗಳನ್ನು ಆಲಿಸಿ, ಪರಸ್ಪರ ಚರ್ಚಿಸಿ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.</p>.<p>ಜೂನ್ 2ರಂದು ಪ್ರತಿಯೊಂದು ಹಳ್ಳಿಗೂ ಬರುತ್ತೇವೆ. ಅಲ್ಲೇ ಚರ್ಚೆ ಮಾಡುತ್ತೇವೆ. ರೈತರನ್ನು ಕೇಳದೇ ಮುಂದುವರಿಯುವುದಿಲ್ಲ. ಈಗಾಗಲೇ ಬೂವನಹಳ್ಳಿ ಬಳಿ ಒಂದು ಸ್ಮಶಾನ ಮಾಡಿದ್ದೇವೆ. ಬೇಕಿದ್ದರೆ ಮತ್ತೊಂದು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.</p>.<p>ಮೂಲ ಸೌಕರ್ಯಗಳನ್ನು ಹಂತ ಹಂತವಾಗಿ ಮಾಡುತ್ತೇವೆ. ರೈತರು ಕೇಳುತ್ತಿರುವುದು ಸರಿ ಇದೆ. ಕಂಪನಿಯವರು ಬೇಗ ಕೆಲಸ ಮಾಡಲಿ ಎಂದು ದಿನಾಂಕ ಘೋಷಣೆ ಮಾಡಿದ್ದೇವೆ. ದಿನಾಂಕದಲ್ಲಿ ವ್ಯತ್ಯಾಸ ಆಗಬಹುದು. ರೈತರಿಗೆ ಕಾರ್ನರ್ ಸೈಟ್ ನೀಡುವ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-36-653863671</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>