<p>ಹಾಸನ: ‘ಅಚ್ಛೆ ದಿನ್ ಆಯೇಗಾ ಎಂದು ಹೇಳಿದ್ದ ಮೋದಿ, ಈಗ ಜನರ ಮೇಲೆ ಬೆಲೆ ಏರಿಕೆಯ ಗದಾಪ್ರಹಾರ ಮಾಡುತ್ತಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಜನರ ಜೇಬಿಗೆ ಕೈ ಹಾಕಿದ್ದಾರೆ. ಮೋದಿಗೆ ನಾಚಿಕೆಯಾಗಬೇಕು’ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದರು.</p>.<p>ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್–19 ಸಂದರ್ಭದಲ್ಲಿ ಪಿಎಂ ಕೇರ್ಸ್ ಹೆಸರಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹ ಮಾಡಿದ್ರಿ. ಆ ಹಣ ಎಲ್ಲಿ ಹೋಯ್ತು? ಈಗ ಪೆಟ್ರೋಲ್, ಡೀಸೆಲ್ ದರ ಏರಿಸಿ ಜನರ ಮೇಲೆ ಗದಾಪ್ರಹಾರ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು.</p>.<p>‘ಚಿನ್ನ, ಬೆಳ್ಳಿ ಕೊಳ್ಳಬೇಡಿ ಅಂತೀರಾ. ಮದುವೆ ಆಗಬೇಕಾದರೆ ತಾಳಿ, ಕಾಲುಂಗುರ ಬೇಕಲ್ಲವೇ? ಮೋದಿಯವರಿಗೆ ಸಾಂಸಾರಿಕ ಬದುಕು ಅರ್ಥವಾಗಿಲ್ಲ. ರಾಮನ ಹೆಸರು ಮಾತ್ರ ಹೇಳುತ್ತಾರೆ’ ಎಂದು ಲೇವಡಿ ಮಾಡಿದರು.</p>.<p>‘ವರ್ಕ್ ಫ್ರಂ ಹೋಂ ಅಂತೀರಾ. ರೈತ ಹೇಗೆ ಮನೆಯಿಂದ ಕೆಲಸ ಮಾಡುತ್ತಾನೆ? ಈ ದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಲ್ಲವೇ? ವಿಶೇಷ ಅಧಿವೇಶನ ಕರೆದು ಚರ್ಚೆ ಮಾಡಬೇಕಿತ್ತಲ್ಲವೇ? ಆರ್ಥಿಕ ತಜ್ಞರ ಜೊತೆ ಮಾತನಾಡಿದ್ದೀರಾ? ಆರ್ಎಸ್ಎಸ್ನವರು ಹೇಳಿದ್ದನ್ನು ಅನೌನ್ಸ್ ಮಾಡುತ್ತಿರುವಿರಾ’ ಎಂದು ಕಿಡಿಕಾರಿದರು.</p>.<p>‘ದೇಶದ ಸಾಮರಸ್ಯ, ಆರ್ಥಿಕತೆ ಹಾಳು ಮಾಡಿದ್ದೀರಿ. ರೈತರು, ಜನರ ಮೇಲೆ ನಿರ್ಬಂಧ ಹೇರಿ ಆರ್ಥಿಕತೆಯನ್ನು ಕೆಟ್ಟ ಸ್ಥಿತಿಗೆ ತೆಗೆದುಕೊಂಡು ಹೋದವರು ಯಾರಾದರೂ ಇದ್ದರೆ ಅದು ಮಿಸ್ಟರ್ ಮೋದಿ’ ಎಂದು ಆರೋಪಿಸಿದರು.</p>.<p>‘ನಿಮ್ಮ ವೈಫಲ್ಯದಿಂದ ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆಯಿತು. ಹಗಲು ರಾತ್ರಿ ಓದಿದ್ದ ಮಕ್ಕಳಿಗೆ ಅನ್ಯಾಯ ಆಯಿತು. ಇದರ ನೈತಿಕ ಹೊಣೆ ಯಾರು ಹೊರುತ್ತೀರಾ? ನೀನೇನು ಮಾಡುತ್ತಿದ್ದೀಯಪ್ಪಾ ಮಿಸ್ಟರ್ ಮೋದಿ’ ಎಂದು ಪ್ರಶ್ನಿಸಿದರು.</p>.<p>‘ನಿಮಗೆ ಸ್ವಲ್ಪ ಬದ್ಧತೆ ಇದ್ದರೆ ದೇಶದ ಕ್ಷಮೆ ಯಾಚಿಸಿ. ಬೆಲೆ ಏರಿಕೆಯನ್ನು ವಾಪಸ್ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-36-1154638649</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: ‘ಅಚ್ಛೆ ದಿನ್ ಆಯೇಗಾ ಎಂದು ಹೇಳಿದ್ದ ಮೋದಿ, ಈಗ ಜನರ ಮೇಲೆ ಬೆಲೆ ಏರಿಕೆಯ ಗದಾಪ್ರಹಾರ ಮಾಡುತ್ತಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಜನರ ಜೇಬಿಗೆ ಕೈ ಹಾಕಿದ್ದಾರೆ. ಮೋದಿಗೆ ನಾಚಿಕೆಯಾಗಬೇಕು’ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದರು.</p>.<p>ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್–19 ಸಂದರ್ಭದಲ್ಲಿ ಪಿಎಂ ಕೇರ್ಸ್ ಹೆಸರಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹ ಮಾಡಿದ್ರಿ. ಆ ಹಣ ಎಲ್ಲಿ ಹೋಯ್ತು? ಈಗ ಪೆಟ್ರೋಲ್, ಡೀಸೆಲ್ ದರ ಏರಿಸಿ ಜನರ ಮೇಲೆ ಗದಾಪ್ರಹಾರ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು.</p>.<p>‘ಚಿನ್ನ, ಬೆಳ್ಳಿ ಕೊಳ್ಳಬೇಡಿ ಅಂತೀರಾ. ಮದುವೆ ಆಗಬೇಕಾದರೆ ತಾಳಿ, ಕಾಲುಂಗುರ ಬೇಕಲ್ಲವೇ? ಮೋದಿಯವರಿಗೆ ಸಾಂಸಾರಿಕ ಬದುಕು ಅರ್ಥವಾಗಿಲ್ಲ. ರಾಮನ ಹೆಸರು ಮಾತ್ರ ಹೇಳುತ್ತಾರೆ’ ಎಂದು ಲೇವಡಿ ಮಾಡಿದರು.</p>.<p>‘ವರ್ಕ್ ಫ್ರಂ ಹೋಂ ಅಂತೀರಾ. ರೈತ ಹೇಗೆ ಮನೆಯಿಂದ ಕೆಲಸ ಮಾಡುತ್ತಾನೆ? ಈ ದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಲ್ಲವೇ? ವಿಶೇಷ ಅಧಿವೇಶನ ಕರೆದು ಚರ್ಚೆ ಮಾಡಬೇಕಿತ್ತಲ್ಲವೇ? ಆರ್ಥಿಕ ತಜ್ಞರ ಜೊತೆ ಮಾತನಾಡಿದ್ದೀರಾ? ಆರ್ಎಸ್ಎಸ್ನವರು ಹೇಳಿದ್ದನ್ನು ಅನೌನ್ಸ್ ಮಾಡುತ್ತಿರುವಿರಾ’ ಎಂದು ಕಿಡಿಕಾರಿದರು.</p>.<p>‘ದೇಶದ ಸಾಮರಸ್ಯ, ಆರ್ಥಿಕತೆ ಹಾಳು ಮಾಡಿದ್ದೀರಿ. ರೈತರು, ಜನರ ಮೇಲೆ ನಿರ್ಬಂಧ ಹೇರಿ ಆರ್ಥಿಕತೆಯನ್ನು ಕೆಟ್ಟ ಸ್ಥಿತಿಗೆ ತೆಗೆದುಕೊಂಡು ಹೋದವರು ಯಾರಾದರೂ ಇದ್ದರೆ ಅದು ಮಿಸ್ಟರ್ ಮೋದಿ’ ಎಂದು ಆರೋಪಿಸಿದರು.</p>.<p>‘ನಿಮ್ಮ ವೈಫಲ್ಯದಿಂದ ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆಯಿತು. ಹಗಲು ರಾತ್ರಿ ಓದಿದ್ದ ಮಕ್ಕಳಿಗೆ ಅನ್ಯಾಯ ಆಯಿತು. ಇದರ ನೈತಿಕ ಹೊಣೆ ಯಾರು ಹೊರುತ್ತೀರಾ? ನೀನೇನು ಮಾಡುತ್ತಿದ್ದೀಯಪ್ಪಾ ಮಿಸ್ಟರ್ ಮೋದಿ’ ಎಂದು ಪ್ರಶ್ನಿಸಿದರು.</p>.<p>‘ನಿಮಗೆ ಸ್ವಲ್ಪ ಬದ್ಧತೆ ಇದ್ದರೆ ದೇಶದ ಕ್ಷಮೆ ಯಾಚಿಸಿ. ಬೆಲೆ ಏರಿಕೆಯನ್ನು ವಾಪಸ್ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-36-1154638649</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>