ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ವಿವಿಧ ಬಡಾವಣೆಗಳಿಂದ ಬರುವ ಭಕ್ತರನ್ನುಆಟೊದಲ್ಲಿ ಕರೆ ತರಲಾಗುತ್ತಿದೆ. ದೇವಿ ದರ್ಶನ ಪಡೆದು ತಮ್ಮ ಊರಿಗೆ ಹೋಗುವವರನ್ನು ಬಸ್ ನಿಲ್ದಾಣ, ರೈಲು ನಿಲ್ದಾಣಕ್ಕೆ ಬಿಡಲಾಗುತ್ತದೆ. ಆಟೊಗಳಿಗೆ ಉಚಿತ ಪ್ರಯಾಣ ಎಂಬ ಬರಹದ ಬ್ಯಾನರ್ ಹಾಕಲಾಗಿದೆ.
ಬೆಳಗ್ಗೆ 6 ರಿಂದ 9ರವರೆಗೆ ಉಚಿತ ಆಟೊ ಸೇವೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯಕ್ಕೆ ಹೋಗುವ ಭಕ್ತರನ್ನು ಆಟೊ ಚಾಲಕರು ಕೂಗಿ ಕರೆಯುತ್ತಿದ್ದ ದೃಶ್ಯ ಕಂಡು ಬಂತು.