<p><strong>ಹಾಸನ:</strong> ಸುಮಾರು ₹900 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ದೇಶದ ಮೊದಲ ಮೆಗಾ ಡೇರಿ ಜೂನ್ ಅಂತ್ಯದ ವೇಳೆಗೆ ಬಹುತೇಕ ಪೂರ್ಣವಾಗಲಿದ್ದು, ಉದ್ಘಾಟನೆಗೆ ಪ್ರಧಾನಿ ಮೋದಿ ಬರಲಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತಿಳಿಸಿದರು.</p>.<p>ನಗರದ ಮೆಗಾ ಡೈರಿ ಕಾಮಗಾರಿ ಪರಿಶೀಲಿಸಿದ ಬಳಿಕ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಗಾ ಡೈರಿಗೆ ರಾಜ್ಯ ಸರ್ಕಾರದ ದಾಕ್ಷಿಣ್ಯ ಇಲ್ಲದೇ ಇರುವುದರಿಂದ ಪ್ರಧಾನಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಉದ್ಘಾಟನೆ ಮಾಡಬೇಕು. ಇದು ರೇವಣ್ಣ ಅವರ ಶ್ರಮದ ಫಲ ಎಂದರು.</p>.<p>‘ಮೇ 18ಕ್ಕೆ ನನಗೆ 94 ವರ್ಷ ತುಂಬಲಿದೆ. ನಾನು ಈ ವಯಸ್ಸಿನಲ್ಲಿ ಇರುವಾಗಲೇ ಮೆಗಾ ಡೈರಿ ಉದ್ಘಾಟನೆಯಾಗಿ, ದೇಶದಲ್ಲೇ ಮೊದಲ ಸ್ಥಾನಕ್ಕೆ ಏರುವುದನ್ನು ನೋಡುವುದೇ ನನ್ನ ಆಸೆ’ ಎಂದು ಭಾವುಕರಾದರು.</p>.<p>‘ರೇವಣ್ಣ ಅವರ ಶ್ರಮಕ್ಕೆ ತಲೆಬಾಗಬೇಕು. ಯಾವುದೇ ದೋಷ ಇರಬಾರದು. ರೇವಣ್ಣ ಅವರು ಹಿಡಿದ ಕೆಲಸವನ್ನು ಮುಗಿಸಿಯೇ ತೀರುತ್ತಾರೆ. ಅದಕ್ಕೆ ಅವರ ಹಟವೇ ಸಾಕ್ಷಿ’ ಎಂದು ಎಚ್.ಡಿ. ರೇವಣ್ಣ ಕಾರ್ಯವೈಖರಿಯನ್ನು ಶ್ಲಾಘಿಸಿದರು.</p>.<p>‘ಮೆಗಾ ಡೇರಿ ₹900 ಕೋಟಿ ಯೋಜನೆ. ರಾಜ್ಯ ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ಇಲ್ಲ. ಈ ಸರ್ಕಾರಕ್ಕೂ ಸಂಸ್ಥೆಗೂ ಸಂಬಂಧವಿಲ್ಲ. ಕೇಂದ್ರ ಸರ್ಕಾರ ₹280 ಕೋಟಿ ನೀಡಿದೆ. ಹಾಸನ ಒಂದರಲ್ಲೇ 11 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಚಿಕ್ಕಮಗಳೂರು, ಕೊಡಗು ಸೇರಿ ಮೂರು ಜಿಲ್ಲೆಯಿಂದ 15.30 ಲಕ್ಷ ಲೀಟರ್ ಹಾಲು ಬರುತ್ತಿದೆ. 20 ಲಕ್ಷ ಲೀಟರ್ ಗುರಿ ಹೊಂದಲಾಗಿದೆ. ಭಾರತದಲ್ಲಿ ಈ ರೀತಿಯ ಮತ್ತೊಂದು ಡೈರಿ ಇಲ್ಲ. ಜರ್ಮನಿ ತಂತ್ರಜ್ಞಾನದಲ್ಲಿ ರೂಪುಗೊಂಡಿದೆ. ಜೊತೆಗೆ ಅಮ್ಯೂಸ್ಮೆಂಟ್ ಪಾರ್ಕ್ ಮಾಡಲಾಗುತ್ತಿದೆ’ ಎಂದರು.</p>.<p>‘ಈ ಮೆಗಾ ಡೈರಿ ಎದುರಿನ ಯೋಜನೆಯ ಕೆಲಸ ಸಾಕಷ್ಟು ಬಾಕಿ ಇದೆ. ಅದು ಮುಗಿದ ಮೇಲೆ ಪ್ರಧಾನಿ ಅವರಲ್ಲಿ ಮನವಿ ಮಾಡಿ ಜೂನ್ ವೇಳೆಗೆ ಉದ್ಘಾಟನೆಗೆ ಕರೆತರುತ್ತೇನೆ. ಎಂಡಿ ಅವರು ಜರ್ಮನ್ ಕಂಪನಿ ಹಾಗೂ ಯೋಜನಾ ಅಧಿಕಾರಿಗಳೊಂದಿಗೆ ಮಾತನಾಡಿ ಕಾಮಗಾರಿ ಮುಗಿಸಿ. ಮತ್ತೊಮ್ಮೆ ಬಂದು ನೋಡಿ ಸಮಾಧಾನವಾದಲ್ಲಿ ಪ್ರಧಾನಿಯನ್ನು ಕರೆಯುತ್ತೇನೆ’ ಎಂದರು.</p>.<p>‘20 ಸಾವಿರ ಹಸು ವಿತರಣೆ ಯೋಜನೆ: ಪ್ರಧಾನಿ ಬರುವ ಮುನ್ನ ಕಡುಬಡವರನ್ನು ಗುರುತಿಸಿ ಅವರ ಜೀವನ ಹಸನಾಗಲು 20 ಸಾವಿರ ಹಸುಗಳನ್ನು ವಿತರಿಸುವ ಯೋಜನೆ ಇದೆ. ಡಿಸಿಸಿ ಬ್ಯಾಂಕ್ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಉದ್ಘಾಟನೆ ಮಾಡಿದರೆ ಇಡೀ ರಾಜ್ಯ, ದೇಶಕ್ಕೆ ಸಂದೇಶ ಹೋಗಲಿದೆ’ ಎಂದು ತಿಳಿಸಿದರು.</p>.<p>ಇದರಲ್ಲಿ ರಾಜಕೀಯ ಇಲ್ಲ, ಯಾರ ಹಂಗೂ ಇಲ್ಲ. ಕುಮಾರಸ್ವಾಮಿ ಬರುತ್ತಾರೆ. ಅಂದು 2-3 ಲಕ್ಷ ಜನ ಸೇರಲಿದ್ದಾರೆ. ಕೆಎಂಎಫ್ ಒಕ್ಕೂಟದ ಸದಸ್ಯರು ಬರಲಿದ್ದಾರೆ ಎಂದರು.</p>.<p>ಶಾಸಕರಾದ ಎಚ್.ಡಿ. ರೇವಣ್ಣ, ಸ್ವರೂಪ ಪ್ರಕಾಶ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-36-1648772686</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ಸುಮಾರು ₹900 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ದೇಶದ ಮೊದಲ ಮೆಗಾ ಡೇರಿ ಜೂನ್ ಅಂತ್ಯದ ವೇಳೆಗೆ ಬಹುತೇಕ ಪೂರ್ಣವಾಗಲಿದ್ದು, ಉದ್ಘಾಟನೆಗೆ ಪ್ರಧಾನಿ ಮೋದಿ ಬರಲಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತಿಳಿಸಿದರು.</p>.<p>ನಗರದ ಮೆಗಾ ಡೈರಿ ಕಾಮಗಾರಿ ಪರಿಶೀಲಿಸಿದ ಬಳಿಕ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆಗಾ ಡೈರಿಗೆ ರಾಜ್ಯ ಸರ್ಕಾರದ ದಾಕ್ಷಿಣ್ಯ ಇಲ್ಲದೇ ಇರುವುದರಿಂದ ಪ್ರಧಾನಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಉದ್ಘಾಟನೆ ಮಾಡಬೇಕು. ಇದು ರೇವಣ್ಣ ಅವರ ಶ್ರಮದ ಫಲ ಎಂದರು.</p>.<p>‘ಮೇ 18ಕ್ಕೆ ನನಗೆ 94 ವರ್ಷ ತುಂಬಲಿದೆ. ನಾನು ಈ ವಯಸ್ಸಿನಲ್ಲಿ ಇರುವಾಗಲೇ ಮೆಗಾ ಡೈರಿ ಉದ್ಘಾಟನೆಯಾಗಿ, ದೇಶದಲ್ಲೇ ಮೊದಲ ಸ್ಥಾನಕ್ಕೆ ಏರುವುದನ್ನು ನೋಡುವುದೇ ನನ್ನ ಆಸೆ’ ಎಂದು ಭಾವುಕರಾದರು.</p>.<p>‘ರೇವಣ್ಣ ಅವರ ಶ್ರಮಕ್ಕೆ ತಲೆಬಾಗಬೇಕು. ಯಾವುದೇ ದೋಷ ಇರಬಾರದು. ರೇವಣ್ಣ ಅವರು ಹಿಡಿದ ಕೆಲಸವನ್ನು ಮುಗಿಸಿಯೇ ತೀರುತ್ತಾರೆ. ಅದಕ್ಕೆ ಅವರ ಹಟವೇ ಸಾಕ್ಷಿ’ ಎಂದು ಎಚ್.ಡಿ. ರೇವಣ್ಣ ಕಾರ್ಯವೈಖರಿಯನ್ನು ಶ್ಲಾಘಿಸಿದರು.</p>.<p>‘ಮೆಗಾ ಡೇರಿ ₹900 ಕೋಟಿ ಯೋಜನೆ. ರಾಜ್ಯ ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯ ಇಲ್ಲ. ಈ ಸರ್ಕಾರಕ್ಕೂ ಸಂಸ್ಥೆಗೂ ಸಂಬಂಧವಿಲ್ಲ. ಕೇಂದ್ರ ಸರ್ಕಾರ ₹280 ಕೋಟಿ ನೀಡಿದೆ. ಹಾಸನ ಒಂದರಲ್ಲೇ 11 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಚಿಕ್ಕಮಗಳೂರು, ಕೊಡಗು ಸೇರಿ ಮೂರು ಜಿಲ್ಲೆಯಿಂದ 15.30 ಲಕ್ಷ ಲೀಟರ್ ಹಾಲು ಬರುತ್ತಿದೆ. 20 ಲಕ್ಷ ಲೀಟರ್ ಗುರಿ ಹೊಂದಲಾಗಿದೆ. ಭಾರತದಲ್ಲಿ ಈ ರೀತಿಯ ಮತ್ತೊಂದು ಡೈರಿ ಇಲ್ಲ. ಜರ್ಮನಿ ತಂತ್ರಜ್ಞಾನದಲ್ಲಿ ರೂಪುಗೊಂಡಿದೆ. ಜೊತೆಗೆ ಅಮ್ಯೂಸ್ಮೆಂಟ್ ಪಾರ್ಕ್ ಮಾಡಲಾಗುತ್ತಿದೆ’ ಎಂದರು.</p>.<p>‘ಈ ಮೆಗಾ ಡೈರಿ ಎದುರಿನ ಯೋಜನೆಯ ಕೆಲಸ ಸಾಕಷ್ಟು ಬಾಕಿ ಇದೆ. ಅದು ಮುಗಿದ ಮೇಲೆ ಪ್ರಧಾನಿ ಅವರಲ್ಲಿ ಮನವಿ ಮಾಡಿ ಜೂನ್ ವೇಳೆಗೆ ಉದ್ಘಾಟನೆಗೆ ಕರೆತರುತ್ತೇನೆ. ಎಂಡಿ ಅವರು ಜರ್ಮನ್ ಕಂಪನಿ ಹಾಗೂ ಯೋಜನಾ ಅಧಿಕಾರಿಗಳೊಂದಿಗೆ ಮಾತನಾಡಿ ಕಾಮಗಾರಿ ಮುಗಿಸಿ. ಮತ್ತೊಮ್ಮೆ ಬಂದು ನೋಡಿ ಸಮಾಧಾನವಾದಲ್ಲಿ ಪ್ರಧಾನಿಯನ್ನು ಕರೆಯುತ್ತೇನೆ’ ಎಂದರು.</p>.<p>‘20 ಸಾವಿರ ಹಸು ವಿತರಣೆ ಯೋಜನೆ: ಪ್ರಧಾನಿ ಬರುವ ಮುನ್ನ ಕಡುಬಡವರನ್ನು ಗುರುತಿಸಿ ಅವರ ಜೀವನ ಹಸನಾಗಲು 20 ಸಾವಿರ ಹಸುಗಳನ್ನು ವಿತರಿಸುವ ಯೋಜನೆ ಇದೆ. ಡಿಸಿಸಿ ಬ್ಯಾಂಕ್ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಉದ್ಘಾಟನೆ ಮಾಡಿದರೆ ಇಡೀ ರಾಜ್ಯ, ದೇಶಕ್ಕೆ ಸಂದೇಶ ಹೋಗಲಿದೆ’ ಎಂದು ತಿಳಿಸಿದರು.</p>.<p>ಇದರಲ್ಲಿ ರಾಜಕೀಯ ಇಲ್ಲ, ಯಾರ ಹಂಗೂ ಇಲ್ಲ. ಕುಮಾರಸ್ವಾಮಿ ಬರುತ್ತಾರೆ. ಅಂದು 2-3 ಲಕ್ಷ ಜನ ಸೇರಲಿದ್ದಾರೆ. ಕೆಎಂಎಫ್ ಒಕ್ಕೂಟದ ಸದಸ್ಯರು ಬರಲಿದ್ದಾರೆ ಎಂದರು.</p>.<p>ಶಾಸಕರಾದ ಎಚ್.ಡಿ. ರೇವಣ್ಣ, ಸ್ವರೂಪ ಪ್ರಕಾಶ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-36-1648772686</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>