ಹಾಸನ: ನಗರದ ಕ್ವಾಲಿಟಿ ಬಾರ್ ಪರವಾನಗಿ ರದ್ದುಪಡಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಯತ್ನಿಸಿದಾಗ ಪೊಲೀಸರು ತಡೆದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ್ದ ನೂರಾರು ಕಾರ್ಯಕರ್ತರನ್ನ ಎಎಸ್ಪಿ ನಂದಿನಿ ನೇತೃತ್ವದ ಪೊಲೀಸರ ತಂಡ ಹೊರಗೆ ಕಳುಹಿಸಿತು.
ಈ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಮಧ್ಯಪ್ರವೇಶಿಸಿ, ಬಾರ್ ಮಾಲೀಕರ ವಿರುದ್ದ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಮೊದಲು ತಿಳಿಸುವಂತೆ ಪಟ್ಟು ಹಿಡಿದರು.
ಲಾಕ್ ಡೌನ್ ಆದೇಶ ಧಿಕ್ಕರಿಸಿ ಮದ್ಯ ಮಾರಾಟ ಮಾಡಿದ್ದಾರೆಂಬ ಆರೋಪ ಶಾಸಕ ಪ್ರೀತಂ ಜೆ. ಗೌಡ ಆಪ್ತರಿಗೆ ಸೇರಿದ ಕ್ವಾಲಿಟಿ ಬಾರ್ ಮೇಲಿದೆ. ಮೊನ್ನೆ ರಾತ್ರಿ ದಾಳಿ ನಡೆಸಿದ್ದ ಅಬಕಾರಿ ಅಧಿಕಾರಿಗಳು ಬಾಗಿಲು ಹಾಕಿಸಿದ್ದರು.
ಪ್ರತಿಭಟನೆಯಲ್ಲಿ ಜಿಪಂ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್, ಅಗಿಲೆ ಯೋಗೀಶ್, ನಗರಸಭೆ ಸದಸ್ಯರು ಭಾಗಿಯಾಗಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಜಿಲ್ಲಾಧಿಕಾರಿ ಜತೆ ಸಭಾಂಗಣದಲ್ಲಿ ಸಭೆ ನಡೆಸುತ್ತಿದ್ದಾರೆ.