ಎಚ್.ಡಿ.ಕುಮಾರ ಸ್ವಾಮಿ ಮಾತನಾಡಿ, ‘ಬೆಂಗಳೂರಿನಲ್ಲಿ ಲಕ್ಷಾಂತರ ಕೋಟಿರೂಪಾಯಿ ಸರ್ಕಾರಿ ಭೂಮಿ, ಆಸ್ತಿ ಕಬಳಿಕೆ ಮಾಡಲಾಗಿದೆ. ಆ ದಾಖಲೆಗಳನ್ನು ಇನ್ನೂ ನನ್ನ ಹಾಗೂ ರಾಮಸ್ವಾಮಿ ಬಳಿ ಇದೆ. ಸರ್ಕಾರಕ್ಕೆ ಒಂದು ಸೆಟ್ ಮಾಹಿತಿ ಕೊಡಲಾಗಿದೆ. ₹ 4-5 ಲಕ್ಷ ಕೋಟಿ ಆಸ್ತಿ ಸರ್ಕಾರದ ಒಂದು ವರ್ಷದ ಬಜೆಟ್ಗಿಂತ ಹೆಚ್ಚಿನ ಆಸ್ತಿ ಕಬಳಿಕೆಯಾಗಿದೆ’ ಎಂದರು.