ನುಗ್ಗೇಹಳ್ಳಿ: ಹೋಬಳಿಯ ಸುತ್ತಮುತ್ತ ಮಂಗಳವಾರ ಸಂಜೆ ಬಿದ್ದ ಭಾರಿ ಮಳೆ ಗಾಳಿಗೆ ಸುಮಾರು 200 ತೆಂಗಿನ ಮರಗಳು ಸೇರಿದಂತೆ ಬಾಳೆ, ಮಾವು ಬೆಳೆಗಳು ನೆಲಕಚ್ಚಿವೆ.
ಹೋಬಳಿಯ ಸುತ್ತಮುತ್ತ ಬಿದ್ದ ಭಾರಿ ಮಳೆ, ಗಾಳಿಗೆ ತೆಂಗಿನ ಮರ ಸೇರಿದಂತೆ ಸುಮಾರು 60 ರಿಂದ 65 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ ಬೆಳೆ ಬಹುತೇಕ ನೆಲಕಚ್ಚಿದ್ದು ಬಾರಿ ಬಿರುಗಾಳಿ ಆಲಿಕಲ್ಲಿಗೆ ಮಾವಿನ ಬೆಳೆಗೆ ಹಾನಿ ಉಂಟಾಗಿದೆ. ಸುಮಾರು 38.8 ಮಿ.ಮೀ.ನಷ್ಟು ಮಳೆಯಾಗಿದೆ.
ಸ್ಥಳಕ್ಕೆ ಹೋಬಳಿ ಕಂದಾಯ ಅಧಿಕಾರಿ ಲೋಕೇಶ್, ಗ್ರಾಮಲೆಕ್ಕಿಗ ಶ್ರೀನಿವಾಸರಾವ್ ಭೇಟಿ ನೀಡಿ ಹಾನಿಗೊಳಗಾಗಿರುವ ರೈತರಿಂದ ಮನವಿ ಸ್ವೀಕರಿಸಿದರು.