ಹಾಸನ–ಮಾರನಹಳ್ಳಿ 47 ಕಿ.ಮೀ. ಚತುಷ್ಪಥ ಕಾಮಗಾರಿಗಾಗಿ ದೋಣಿಗಾಲ್ನಲ್ಲಿ 120 ಅಡಿ ಆಳದಲ್ಲಿ 800 ಮೀಟರ್ ಉದ್ದ ಭೂಮಿಯನ್ನು 2019ರಲ್ಲಿಯೇ ಬಗೆಯಲಾಯಿತು. ಆದರೆ, ತಡೆಗೋಡೆ ನಿರ್ಮಾಣ ಮಾಡಲಿಲ್ಲ. ಪರಿಣಾಮ 2020ರಿಂದ ಪ್ರತಿ ಮಳೆಗಾಲದಲ್ಲಿ ಭೂ ಕುಸಿತ ಉಂಟಾಗುತ್ತಲೇ ಇದೆ. ಮಳೆ ನೀರಿನೊಂದಿಗೆ ಮಣ್ಣು ಕೊಚ್ಚಿ ಹೋಗುತ್ತಿದೆ. ರಸ್ತೆಯ ಸಮತಟ್ಟು ಪ್ರದೇಶದ 6 ಅಡಿ ಅಗಲ, 15 ಅಡಿ ಉದ್ದ ಹಾಗೂ 120 ಅಡಿ ಆಳಕ್ಕೆ ಮಣ್ಣು ಕುಸಿದು ಬಿದ್ದಿದೆ.