ಕೆಆರ್ಎಸ್ನಿಂದ ತಮಿಳುನಾಡಿಗೆ ಎರಡು ತಿಂಗಳಲ್ಲಿ 310 ಟಿಎಂಸಿ ನೀರು ಹರಿದಿದ್ದು, ಅದರಲ್ಲಿ ಹೇಮಾವತಿ ನದಿಯ 45 ಟಿಎಂಸಿ ನೀರು ಸೇರಿದೆ.ಜಲಾಶಯ ನಿರ್ಮಾಣವಾದ 40 ವರ್ಷಗಳಲ್ಲಿ ಎರಡು ತಿಂಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೀರು ಹೊರ ಹೋಗಿಲ್ಲ.
ಕೊಡಗು, ಸಕಲೇಶಪುರ, ಮೂಡಿಗೆರೆ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸರಾಸರಿ 8 ರಿಂದ 9 ಸಾವಿರ ಕ್ಯುಸೆಕ್ ಇದ್ದ ಒಳ ಹರಿವು, ಪ್ರಸ್ತುತ 7 ಸಾವಿರ ಕ್ಯುಸೆಕ್ಗೆ ಇಳಿದಿದೆ.
‘ಇದೇ ರೀತಿ ಮಳೆ ಮುಂದುವರಿದರೆ ವರ್ಷಾಂತ್ಯಕ್ಕೆ ಅಂದಾಜು 60 ಟಿಎಂಸಿ ನೀರು ಹೊರ ಹೋಗುವ ಸಾಧ್ಯತೆ ಇದೆ’ ಎಂದು ಅಣೆಕಟ್ಟೆ ಅಧಿಕಾರಿಗಳು ತಿಳಿಸಿದರು .