<p><strong>ಹೊಳೆನರಸೀಪುರ:</strong> ತಾಲ್ಲೂಕಿನ ಹರಿಹರಪುರದಲ್ಲಿ ಉಡಸಲಮ್ಮ, ದುರ್ಗಾಪರಮೇಶ್ವರಿ ರಜತ ಮಹೋತ್ಸವ ಹಾಗೂ ಶತ ಚಂಡಿಕಾ ಯಾಗ ಶುಕ್ರವಾರ ವೈಭವದಿಂದ ನಡೆಯಿತು.</p>.<p>ಹರಿಹರಪುರ ಸುತ್ತಮುತ್ತಲಿನ ಏಳು ಹಳ್ಳಿಗಳ ಜನರು ಒಟ್ಟಾಗಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಅತೀತಾನಂದನಾಥರು ವಹಿಸಿದ್ದರು.</p>.<p>ಪ್ರತಿನಿತ್ಯ ಶತ ಚಂಡಿ ಪಾರಾಯಣ, ಲಲಿತಾ ಮಹಾ ತ್ರಿಪುರಸುಂದರಿ ಪಂಚವಿಶತಿ ನಾಮ ಸ್ತೋತ್ರ ಪಠಣೆ, ದೇವಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ, ದೇವಿ ಮಹಾತ್ಮೆಯ ಉಪನ್ಯಾಸ, ಪ್ರತಿನಿತ್ಯ ಪ್ರಸಾದ ಸೇರಿದಂತೆ ಅನೇಕ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಿತು.</p>.<p>ಯಾಗದ ಪೂರ್ಣಾಹುತಿ ದಿನ ತವನಂದಿಯ ವೀರಭದ್ರೇಶ್ವರನ ಉತ್ಸವ, ಬೋರನಹಳ್ಳಿಯ ಬಸವೇಶ್ವರನ ಉತ್ಸವ, ಸಿಗರನಹಳ್ಳಿಯ ಬಾಣದೇವರ ಉತ್ಸವಗಳು ನಡೆದವು.</p>.<p>ಪ್ರತಿ ಹಳ್ಳಿಗಳ ಜನರು ಪೂರ್ಣಾಹುತಿಗೆ ವಿಶೇಷ ರೇಷ್ಮೆ ವಸ್ತ್ರ ಸೇವೆ ಸಮರ್ಪಿಸಿದರು. ಯಾಗದ ಪ್ರಸಾದ ಸಿದ್ಧಪಡಿಸಲು ಏಳು ಹಳ್ಳಿಗಳ ಪ್ರತಿಯೊಂದು ಮನೆಯಿಂದಲೂ ಅಕ್ಕಿ ಹಾಗೂ ಬೆಲ್ಲ ಸಂಗ್ರಹಿಸಿ, ಯಾಗ ಪೂಜಾ ಮಹೋತ್ಸವಕ್ಕೆ ನೀಡಿದರು.</p>.<p>ಪ್ರಧಾನ ಸೇವಾರ್ಥ ರಾದ ಚಂದ್ರಶೇಖರ್, ಪ್ರಶಾಂತ್ ಗೌಡರು ಕುಟುಂಬ ಸಮೇತ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.</p>.<p>ಸುತ್ತಲ ಏಳು ಹಳ್ಳಿಗಳ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಶ್ರೇಯಸ್ ಎಂ. ಪಟೇಲ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆನರಸೀಪುರ:</strong> ತಾಲ್ಲೂಕಿನ ಹರಿಹರಪುರದಲ್ಲಿ ಉಡಸಲಮ್ಮ, ದುರ್ಗಾಪರಮೇಶ್ವರಿ ರಜತ ಮಹೋತ್ಸವ ಹಾಗೂ ಶತ ಚಂಡಿಕಾ ಯಾಗ ಶುಕ್ರವಾರ ವೈಭವದಿಂದ ನಡೆಯಿತು.</p>.<p>ಹರಿಹರಪುರ ಸುತ್ತಮುತ್ತಲಿನ ಏಳು ಹಳ್ಳಿಗಳ ಜನರು ಒಟ್ಟಾಗಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಅತೀತಾನಂದನಾಥರು ವಹಿಸಿದ್ದರು.</p>.<p>ಪ್ರತಿನಿತ್ಯ ಶತ ಚಂಡಿ ಪಾರಾಯಣ, ಲಲಿತಾ ಮಹಾ ತ್ರಿಪುರಸುಂದರಿ ಪಂಚವಿಶತಿ ನಾಮ ಸ್ತೋತ್ರ ಪಠಣೆ, ದೇವಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ, ದೇವಿ ಮಹಾತ್ಮೆಯ ಉಪನ್ಯಾಸ, ಪ್ರತಿನಿತ್ಯ ಪ್ರಸಾದ ಸೇರಿದಂತೆ ಅನೇಕ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಿತು.</p>.<p>ಯಾಗದ ಪೂರ್ಣಾಹುತಿ ದಿನ ತವನಂದಿಯ ವೀರಭದ್ರೇಶ್ವರನ ಉತ್ಸವ, ಬೋರನಹಳ್ಳಿಯ ಬಸವೇಶ್ವರನ ಉತ್ಸವ, ಸಿಗರನಹಳ್ಳಿಯ ಬಾಣದೇವರ ಉತ್ಸವಗಳು ನಡೆದವು.</p>.<p>ಪ್ರತಿ ಹಳ್ಳಿಗಳ ಜನರು ಪೂರ್ಣಾಹುತಿಗೆ ವಿಶೇಷ ರೇಷ್ಮೆ ವಸ್ತ್ರ ಸೇವೆ ಸಮರ್ಪಿಸಿದರು. ಯಾಗದ ಪ್ರಸಾದ ಸಿದ್ಧಪಡಿಸಲು ಏಳು ಹಳ್ಳಿಗಳ ಪ್ರತಿಯೊಂದು ಮನೆಯಿಂದಲೂ ಅಕ್ಕಿ ಹಾಗೂ ಬೆಲ್ಲ ಸಂಗ್ರಹಿಸಿ, ಯಾಗ ಪೂಜಾ ಮಹೋತ್ಸವಕ್ಕೆ ನೀಡಿದರು.</p>.<p>ಪ್ರಧಾನ ಸೇವಾರ್ಥ ರಾದ ಚಂದ್ರಶೇಖರ್, ಪ್ರಶಾಂತ್ ಗೌಡರು ಕುಟುಂಬ ಸಮೇತ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.</p>.<p>ಸುತ್ತಲ ಏಳು ಹಳ್ಳಿಗಳ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಶ್ರೇಯಸ್ ಎಂ. ಪಟೇಲ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>