<p><strong>ಹೊಳೆನರಸೀಪುರ:</strong> ಇಲ್ಲಿನ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಯುಗಾದಿ ಅಂಗವಾಗಿ ಗುರುವಾರ ರಾತ್ರಿ ಹನುಮಂತೋತ್ಸವ ನಡೆಯಿತು.</p>.<p>ಲಕ್ಷ್ಮಿನರಸಿಂಹಸ್ವಾಮಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. </p>.<p>ಉತ್ತಾರಾಧಿಮಠದವರು ನೀಡಿರುವ ವಜ್ರದ ಆಭರಣಗಳಿಂದ ಸ್ವಾಮಿಯನ್ನು ಅಲಂಕರಿಸಿ, ನಿತ್ಯಾರಾಧನೆ, ಬಲಿಪ್ರಧಾನ, ಕೃಷ್ಣಗಂಧೋತ್ಸವ ನಡೆಸಿ ಮಹಾಮಂಗಳಾರತಿ ಮಾಡಿ ಭಕ್ತರಿಗೆ ತೀರ್ಥ ಪ್ರಸಾದ ನೀಡಲಾಯಿತು.</p>.<p>ಸಂಜೆ ಗೋಧೂಳಿ ಲಗ್ನದಲ್ಲಿ ಸಂಪ್ರದಾಯದಂತೆ ಬಗೆ ಬಗೆಯ ಹೂವುಗಳಿಂದ ಉತ್ಸವಮೂರ್ತಿಯನ್ನು ಅಲಂಕರಿಸಿ ಹನುಮಂತನ ವಿಗ್ರಹದ ಮೇಲೆ ಲಕ್ಷ್ಮಿನರಸಿಂಹಸ್ವಾಮಿ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.</p>.<p>ಭಕ್ತರು ಮೂಟೆಗಟ್ಟಲೆ ಕಡ್ಲೆಕಾಯಿಯನ್ನು ಹನುಮಂತನ ಮೇಲೆ ಎರಚುತ್ತಿದ್ದಂತೆ, ಹನುಮಂತ ಲಕ್ಷ್ಮೀನರಸಿಂಹನನ್ನು ಹೊತ್ತಿರುವ ಅಡ್ಡೆಯನ್ನು ಹೊತ್ತ ನೂರಾರು ಭಕ್ತರು ಮೆರವಣಿಗೆ ನಡೆಸಿದರು.</p>.<p>ಮೆರವಣಿಗೆ ಸಾಗುವ ದಾರಿಯ ಉದ್ದಕ್ಕೂ ಭಕ್ತರು ಕಡ್ಲೆಕಾಯಿಯನ್ನು ಉತ್ಸವ ಮೂರ್ತಿ ಮೇಲೆ ಎಸೆದರು. ಕೆಲವರು ಬಿದ್ದ ಕಡ್ಲೆಕಾಯಿಯನ್ನು ಕಣ್ಣಿಗೆ ಒತ್ತಿಕೊಂಡು ತಿನ್ನುತ್ತಿದ್ದುದು ಕಂಡುಬಂತು.</p>.<p>ಎಸ್ಎಲ್ಎನ್ಸಿ ಸಂಘದ ಯುವಕರು ಉತ್ಸವ ಆಯೋಜಿಸಿದ್ದು, ಪುರಸಭೆ ಮಾಜಿ ಸದಸ್ಯ ಎಚ್.ಕೆ.ಗಂಗಾಧರ್, ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ.ಪ್ರಸನ್ನ, ಎಚ್,ಬಿ, ವೆಂಕಟೇಶ್, ಚಲುವರಾಜು, ಪ್ರವೀಣ್, ರಾಘವೇಂದ್ರ, ರಾಜು, ಚಲುವ, ಗುರು, ಮಹೇಶ್, ಸುಬ್ಬು, ಬಾಬು, ರಾಜೇಶ್, ಸುನೀಲ್, ಮಧು, ಅಭಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆನರಸೀಪುರ:</strong> ಇಲ್ಲಿನ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಯುಗಾದಿ ಅಂಗವಾಗಿ ಗುರುವಾರ ರಾತ್ರಿ ಹನುಮಂತೋತ್ಸವ ನಡೆಯಿತು.</p>.<p>ಲಕ್ಷ್ಮಿನರಸಿಂಹಸ್ವಾಮಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. </p>.<p>ಉತ್ತಾರಾಧಿಮಠದವರು ನೀಡಿರುವ ವಜ್ರದ ಆಭರಣಗಳಿಂದ ಸ್ವಾಮಿಯನ್ನು ಅಲಂಕರಿಸಿ, ನಿತ್ಯಾರಾಧನೆ, ಬಲಿಪ್ರಧಾನ, ಕೃಷ್ಣಗಂಧೋತ್ಸವ ನಡೆಸಿ ಮಹಾಮಂಗಳಾರತಿ ಮಾಡಿ ಭಕ್ತರಿಗೆ ತೀರ್ಥ ಪ್ರಸಾದ ನೀಡಲಾಯಿತು.</p>.<p>ಸಂಜೆ ಗೋಧೂಳಿ ಲಗ್ನದಲ್ಲಿ ಸಂಪ್ರದಾಯದಂತೆ ಬಗೆ ಬಗೆಯ ಹೂವುಗಳಿಂದ ಉತ್ಸವಮೂರ್ತಿಯನ್ನು ಅಲಂಕರಿಸಿ ಹನುಮಂತನ ವಿಗ್ರಹದ ಮೇಲೆ ಲಕ್ಷ್ಮಿನರಸಿಂಹಸ್ವಾಮಿ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.</p>.<p>ಭಕ್ತರು ಮೂಟೆಗಟ್ಟಲೆ ಕಡ್ಲೆಕಾಯಿಯನ್ನು ಹನುಮಂತನ ಮೇಲೆ ಎರಚುತ್ತಿದ್ದಂತೆ, ಹನುಮಂತ ಲಕ್ಷ್ಮೀನರಸಿಂಹನನ್ನು ಹೊತ್ತಿರುವ ಅಡ್ಡೆಯನ್ನು ಹೊತ್ತ ನೂರಾರು ಭಕ್ತರು ಮೆರವಣಿಗೆ ನಡೆಸಿದರು.</p>.<p>ಮೆರವಣಿಗೆ ಸಾಗುವ ದಾರಿಯ ಉದ್ದಕ್ಕೂ ಭಕ್ತರು ಕಡ್ಲೆಕಾಯಿಯನ್ನು ಉತ್ಸವ ಮೂರ್ತಿ ಮೇಲೆ ಎಸೆದರು. ಕೆಲವರು ಬಿದ್ದ ಕಡ್ಲೆಕಾಯಿಯನ್ನು ಕಣ್ಣಿಗೆ ಒತ್ತಿಕೊಂಡು ತಿನ್ನುತ್ತಿದ್ದುದು ಕಂಡುಬಂತು.</p>.<p>ಎಸ್ಎಲ್ಎನ್ಸಿ ಸಂಘದ ಯುವಕರು ಉತ್ಸವ ಆಯೋಜಿಸಿದ್ದು, ಪುರಸಭೆ ಮಾಜಿ ಸದಸ್ಯ ಎಚ್.ಕೆ.ಗಂಗಾಧರ್, ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ.ಪ್ರಸನ್ನ, ಎಚ್,ಬಿ, ವೆಂಕಟೇಶ್, ಚಲುವರಾಜು, ಪ್ರವೀಣ್, ರಾಘವೇಂದ್ರ, ರಾಜು, ಚಲುವ, ಗುರು, ಮಹೇಶ್, ಸುಬ್ಬು, ಬಾಬು, ರಾಜೇಶ್, ಸುನೀಲ್, ಮಧು, ಅಭಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>