ಗೊಂಬೆ ಕುಣಿತ, ಮಹಿಳಾ ವೀರಗಾಸೆ, ಸೋಮನಕುಣಿತ, ಚಿಟ್ಟಿಮೇಳ, ಕೋಲಾಟ ಮೊದಲಾದ ಜನಪದ ನೃತ್ಯಗಳನ್ನು ರಸ್ತೆಯ ಇಕ್ಕೆಲದಲ್ಲಿ ನಿಂತಿದ್ದ ಜನರು ನೋಡಿ ಸಂತಸಪಟ್ಟರು. ರಥೋತ್ಸವದ ನಂತರ ಭಕ್ತರು ಹೊಯ್ಸಳೇಶ್ವರ ಸ್ವಾಮಿಯ ದರ್ಶನ ಪಡೆದು, ಹಣ್ಣು– ಕಾಯಿ ಪೂಜೆ ಮಾಡಿಸಿದರು. ಪ್ರಧಾನ ಅರ್ಚಕ ಎಚ್.ಎಸ್.ಸುಬ್ರಹ್ಮಣ್ಯ ವಲ್ಲೀಶ್ ಹಾಗೂ ತಂಡ ಪೂಜಾ ವಿಧಾನ ನೆರವೇರಿಸಿತು. ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು.