ನಗರಸಭೆ ಮಾಜಿ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ, ‘ದೀನ್ ದಯಾಳ್ ಉಪಾಧ್ಯಾಯ ಸ್ವಯಂ ಸೇವಕ ಸಂಘದ ಶಿಕ್ಷಕರಾಗಿ ಅರ್ಹತೆ ಹೊಂದಿದ್ದರೂ ಅವರನ್ನು ಬೋಧನೆಗೆ ನೇಮಿಸಿಕೊಳ್ಳಲಿಲ್ಲ. ಶಿಕ್ಷಕ ವೃತ್ತಿ ಬದಲಾಗಿ ಅವರು 1942ರಿಂದ ಪೂರ್ಣ ಸಮಯದ ಕೆಲಸಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಅವರು ಮಾಸಿಕ ಪತ್ರಿಕೆ ‘ರಾಷ್ಟ್ರಧರ್ಮ’, ವಾರಪತ್ರಿಕೆ ‘ಪಾಂಚಜನ್ಯ’ ಆರಂಭಿಸಿದ್ದರು ಎಂದು ಹೇಳಿದರು.