ಹಾಸನ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡಿ ಸೋಲು ಅನುಭವಿಸಿದ್ದ ಆಲೂರು ತಾಲ್ಲೂಕಿನ ಕುಂದೂರು ಹೋಬಳಿಯ ಬದುಕರಹಳ್ಳಿ ಗ್ರಾಮದ ಯುವಕ ಲತೇಶ್ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನದ ರಾಜೀವ್ ಕಾಲೇಜಿನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಈತ, ಪ್ರತಿ ಪಂದ್ಯದಲ್ಲೂ ಬೆಟ್ಟಿಂಗ್ ಕಟ್ಟಲು ಸಾಲ ಮಾಡಿಕೊಂಡಿದ್ದ. ಸಾಲದ ಹಣ ವಾಪಸ್ ಮಾಡುವಂತೆ ಸ್ನೇಹಿತರು ಪೀಡಿಸುತ್ತಿದ್ದರಿಂದ ಹೆದರಿ ಮೂರು ದಿನದ ಹಿಂದೆ ವಿಷ ಸೇವಿಸಿದ್ದ ಈತನನ್ನು ಚಿಕತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘₹ 30 ಸಾವಿರ ಹಣ ನೀಡದಿದ್ದರೆ ಮನೆ ಬಳಿ ಬಂದು ಗಲಾಟೆ ಮಾಡುತ್ತೇವೆ ಎಂದು ಸಹಪಾಠಿಗಳಾದ ಸುನಿಲ್, ಗಣೇಶ್, ಎಂಬುವರು ಬೆದರಿಕೆ ಹಾಕಿದ್ದಾರೆ. ಇವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಮೃತನ ಸಂಬಂಧಿ ಹರೀಶ್ ತಿಳಿಸಿದರು.