‘ಆಹಾರ ಅರಸಿ ಬಂದಿದ್ದ ಕರಡಿಗಳು, ಹಂದಿಗಳನ್ನು ಸೆರೆ ಹಿಡಿಯಲು ಹಾಕಿದ್ದ ಉರುಳಿಗೆ ಸಿಕ್ಕಿ ಹಾಕಿಕೊಂಡಿದ್ದವು. ಅವುಗಳನ್ನು ರಕ್ಷಿಸಲಾಗಿದ್ದು, ಸಮೀಪದಲ್ಲೇ ಇರುವ ಹಿರೇಕಲ್ಲು ಗುಡ್ಡಕ್ಕೆ ಬಿಡಲಾಗುವುದು. ತಂತಿಬೇಲಿಗೆ ಉರುಳು ಅಳವಡಿಸಿದ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ತಿಳಿಸಿದ್ದಾರೆ.