ಒಂದು ಎಕರೆ ಪ್ರದೇಶದಲ್ಲಿ ಜೋಳ ಬೆಳೆಯಲು ಉಳುಮೆ, ಗೊಬ್ಬರ, ಬಿತ್ತನೆ ಬೀಜ ಸೇರಿ ಸುಮಾರು ಹತ್ತು ಸಾವಿರ ರೂಪಾಯಿ ಖರ್ಚಾಗುತ್ತದೆ. ಎಲ್ಲ ನೆಲ ಕಚ್ಚಿರುವುದರಿಂದ ಕಷ್ಟಪಟ್ಟು ಗಿಡ ಮೇಲೆತ್ತಿ ಬಿಡಿಸಿದರೂ 2 ಕ್ವಿಂಟಲ್ ಜೋಳ ಸಿಗುವುದಿಲ್ಲ. ಜಾನುವಾರುಗಳಿಗೆ ಉಪಯೋಗಿಸಲೂ ಆಗುವುದಿಲ್ಲ. ಈ ನಷ್ಟವನ್ನು ಸರ್ಕಾರ ಕೂಡಲೇ ಪರಿಹಾರ ಮೊತ್ತ ವಿತರಿಸಬೇಕು ಎಂದು ನಾಕಲಗೂಡು ಕೊಪ್ಪಲು ಗ್ರಾಮದ ಪ್ರಭಾವತಿ ಒತ್ತಾಯಿಸಿದರು.