‘ಕಾಮಗಾರಿ ಆರಂಭದಲ್ಲಿ ಕುಂಟುತ್ತಾ ಸಾಗಿತ್ತು. ಆದರೆ, ಚುನಾವಣೆ ಹತ್ತಿರ ಬಂದಾಗ ಇದಕ್ಕೆ ಚುರುಕು ಸಿಕ್ಕಿತ್ತು’ ಎಂದು ದುದ್ದನಹಳ್ಳಿಯ ಜೆಡಿಎಸ್ ಮುಖಂಡ ಮುನಿರಾಜು ಹೇಳಿದರು. ‘ಈ ಕಟ್ಟಡದಲ್ಲಿ 37 ಇಲಾಖೆಗಳು ಕಾರ್ಯ ನಿರ್ವಹಿಸಬೇಕಿತ್ತು. ಆದರೆ, ಕಟ್ಟಡದ ಶೇ 25ರಷ್ಟು ಕಾಮಗಾರಿಯೂ ಪೂರ್ಣಗೊಳ್ಳದ ಕಾರಣ ಅನನುಕೂಲವೇ ಆಗಿದೆ’ ಎಂದು ಇಲ್ಲಿನ ನಿವಾಸಿ ರಾಜಣ್ಣ ಅಸಮಾಧಾನ ತೋಡಿಕೊಂಡರು.