ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಯೋಜನೆಯಲ್ಲಿ ನೆಪ ಮಾತ್ರಕ್ಕೆ ಅರಸೀಕೆರೆ ಸೇರಿಸಿ, ಒಂದು ಕೆರೆ ತುಂಬಿಸಲು ಅವಕಾಶ ಕಲ್ಪಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಗೆ ಅನುಕೂಲವಾಗುವಂತೆ ಯೋಜನೆ ರೂಪಿಸಿಲಾಗಿದೆ. ಕೃಷ್ಣ ಕಣಿವೆಯಲ್ಲಿ ನೀರು ಪಡೆಯಲು ಹಕ್ಕಿದೆ. ಕ್ಷೇತ್ರದ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅರಸೀಕೆರೆ ಕ್ಷೇತ್ರಕ್ಕೆ ಕನಿಷ್ಟ 20 ಕೆರೆಗಳಿಗೆ ನೀರು ದೊರಕಿಸಿಕೊಡಬೇಕು. ಜಾವಗಲ್, ಬಾಣಾವರ, ಕಣಕೆಟ್ಟೆಗೆ ನೀರು ಕೊಡಲೇಬೇಕು. ಕೆ.ಸಿ.ರೆಡ್ಡಿ ವರದಿ ಹಾಗೂ ದೇವೇಗೌಡರು ಅಧಿವೇಶನದಲ್ಲಿ ಏನು ಹೇಳಿದ್ದಾರೆಂಬ ಮಾಹಿತಿ ಇದೆ’ ಎಂದರು.