<p><strong>ಕೊಣನೂರು (ಹಾಸನ ಜಿಲ್ಲೆ):</strong> ತಂಬಾಕು ದರ ಕುಸಿತ ಖಂಡಿಸಿ ಬೆಳೆಗಾರರು ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಗೆ ಶುಕ್ರವಾರ ಬೀಗ ಜಡಿದು, ತಂಬಾಕು ಬೇಲ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.</p>.<p>ಮಾರುಕಟ್ಟೆಯ ಪ್ಲಾಟ್ಫಾರ್ಮ್ 63ರಲ್ಲಿ, ಗುಣಮಟ್ಟದ ತಂಬಾಕನ್ನು ಕೆ.ಜಿ.ಗೆ ₹260ರಂತೆ ಮತ್ತು ಕಡಿಮೆ ಗುಣಮಟ್ಟದ ತಂಬಾಕನ್ನು ₹150 ರಿಂದ ₹160ಕ್ಕೆ ಖರೀದಿಸಲಾಗುತ್ತಿತ್ತು.</p>.<p>‘ಇಷ್ಟು ಕಡಿಮೆ ದರಕ್ಕೆ ಹರಾಜು ಮಾಡಬಾರದು’ ಎಂದು ಆಕ್ಷೇಪಿಸಿ ವರ್ತಕರು, ಮಾರುಕಟ್ಟೆ ಹರಾಜು ಅಧೀಕ್ಷಕರೊಂದಿಗೆ ಬೆಳೆಗಾರರು ವಾಗ್ವಾದಕ್ಕಿಳಿದರು. ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಿದರು.</p>.<p>ಕೆಲಹೊತ್ತಿನ ಬಳಿಕ, ‘ಈಗಿನ ದರದಲ್ಲಿ ಮಾರಿದರೆ ಉತ್ಪಾದನಾ ವೆಚ್ಚವು ಸಿಗದು’ ಎಂದು ಪ್ರತಿಪಾದಿಸಿ ಮಾರುಕಟ್ಟೆ ಬಂದ್ ಮಾಡಿಸಿದರು. ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೇಲ್ಗಳಿಗೆ ಬೆಂಕಿ ಹಚ್ಚಿದರು. </p>.<p>‘ಕಂಪನಿಗಳು ಮನ ಬಂದ ಬೆಲೆಗೆ ತಂಬಾಕು ಖರೀದಿಸುತ್ತಿವೆ. ಬೆಲೆ ಕುಸಿತ ಕುರಿತು ಹಲವು ಬಾರಿ ಮನವಿ ಮಾಡಿದ್ದರೂ ತಂಬಾಕು ಮಂಡಳಿ ಬೆಂಬಲ ಬೆಲೆ ನೀಡದೇ ಮೋಸ ಮಾಡುತ್ತಿದೆ’ ಎಂದು ದೂರಿದರು.</p>.<p>ಹನ್ಯಾಳು, ಹಂಪಾಪುರ, ಬಸವಾಪಟ್ಟಣ, ರುದ್ರಪಟ್ಟಣ, ಮತ್ತಿಗೋಡು, ವಡ್ಡರಹಳ್ಳಿ, ಶಿರಧನಹಳ್ಳಿ ಮತ್ತು ಮೂಲೆಹೊಸಳ್ಳಿ ಸೇರಿ ಹಲವು ಗ್ರಾಮಗಳ ಬೆಳೆಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.</p>.<p>ಪ್ರತಿಭಟನೆ ನಡುವೆ, ಮಾರುಕಟ್ಟೆಯ ಪ್ಲಾಟ್ಫಾರ್ಮ್ 7 ರಲ್ಲಿ ಎಂದಿನಂತೆ ಹರಾಜು ಪ್ರಕ್ರಿಯೆ ನಡೆಯಿತು. ಪ್ರತಿ ಕೆ.ಜಿ. ಉತ್ಕಷ್ಟ ತಂಬಾಕಿಗೆ ₹301 ದರದಲ್ಲಿ 5 ಬೇಲ್ಗಳ ಹರಾಜು ನಡೆಯಿತು. ಉತ್ತಮ ದರ್ಜೆ ಬೇಲ್ಗಳಿಗೆ ಪ್ರತಿ ಕೆ.ಜಿ.ಗೆ ₹280 ಮತ್ತು ಕನಿಷ್ಠ ಬೆಲೆ ₹160 ರಂತೆ ವಹಿವಾಟು ಸಾಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಣನೂರು (ಹಾಸನ ಜಿಲ್ಲೆ):</strong> ತಂಬಾಕು ದರ ಕುಸಿತ ಖಂಡಿಸಿ ಬೆಳೆಗಾರರು ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಗೆ ಶುಕ್ರವಾರ ಬೀಗ ಜಡಿದು, ತಂಬಾಕು ಬೇಲ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.</p>.<p>ಮಾರುಕಟ್ಟೆಯ ಪ್ಲಾಟ್ಫಾರ್ಮ್ 63ರಲ್ಲಿ, ಗುಣಮಟ್ಟದ ತಂಬಾಕನ್ನು ಕೆ.ಜಿ.ಗೆ ₹260ರಂತೆ ಮತ್ತು ಕಡಿಮೆ ಗುಣಮಟ್ಟದ ತಂಬಾಕನ್ನು ₹150 ರಿಂದ ₹160ಕ್ಕೆ ಖರೀದಿಸಲಾಗುತ್ತಿತ್ತು.</p>.<p>‘ಇಷ್ಟು ಕಡಿಮೆ ದರಕ್ಕೆ ಹರಾಜು ಮಾಡಬಾರದು’ ಎಂದು ಆಕ್ಷೇಪಿಸಿ ವರ್ತಕರು, ಮಾರುಕಟ್ಟೆ ಹರಾಜು ಅಧೀಕ್ಷಕರೊಂದಿಗೆ ಬೆಳೆಗಾರರು ವಾಗ್ವಾದಕ್ಕಿಳಿದರು. ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಿದರು.</p>.<p>ಕೆಲಹೊತ್ತಿನ ಬಳಿಕ, ‘ಈಗಿನ ದರದಲ್ಲಿ ಮಾರಿದರೆ ಉತ್ಪಾದನಾ ವೆಚ್ಚವು ಸಿಗದು’ ಎಂದು ಪ್ರತಿಪಾದಿಸಿ ಮಾರುಕಟ್ಟೆ ಬಂದ್ ಮಾಡಿಸಿದರು. ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೇಲ್ಗಳಿಗೆ ಬೆಂಕಿ ಹಚ್ಚಿದರು. </p>.<p>‘ಕಂಪನಿಗಳು ಮನ ಬಂದ ಬೆಲೆಗೆ ತಂಬಾಕು ಖರೀದಿಸುತ್ತಿವೆ. ಬೆಲೆ ಕುಸಿತ ಕುರಿತು ಹಲವು ಬಾರಿ ಮನವಿ ಮಾಡಿದ್ದರೂ ತಂಬಾಕು ಮಂಡಳಿ ಬೆಂಬಲ ಬೆಲೆ ನೀಡದೇ ಮೋಸ ಮಾಡುತ್ತಿದೆ’ ಎಂದು ದೂರಿದರು.</p>.<p>ಹನ್ಯಾಳು, ಹಂಪಾಪುರ, ಬಸವಾಪಟ್ಟಣ, ರುದ್ರಪಟ್ಟಣ, ಮತ್ತಿಗೋಡು, ವಡ್ಡರಹಳ್ಳಿ, ಶಿರಧನಹಳ್ಳಿ ಮತ್ತು ಮೂಲೆಹೊಸಳ್ಳಿ ಸೇರಿ ಹಲವು ಗ್ರಾಮಗಳ ಬೆಳೆಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.</p>.<p>ಪ್ರತಿಭಟನೆ ನಡುವೆ, ಮಾರುಕಟ್ಟೆಯ ಪ್ಲಾಟ್ಫಾರ್ಮ್ 7 ರಲ್ಲಿ ಎಂದಿನಂತೆ ಹರಾಜು ಪ್ರಕ್ರಿಯೆ ನಡೆಯಿತು. ಪ್ರತಿ ಕೆ.ಜಿ. ಉತ್ಕಷ್ಟ ತಂಬಾಕಿಗೆ ₹301 ದರದಲ್ಲಿ 5 ಬೇಲ್ಗಳ ಹರಾಜು ನಡೆಯಿತು. ಉತ್ತಮ ದರ್ಜೆ ಬೇಲ್ಗಳಿಗೆ ಪ್ರತಿ ಕೆ.ಜಿ.ಗೆ ₹280 ಮತ್ತು ಕನಿಷ್ಠ ಬೆಲೆ ₹160 ರಂತೆ ವಹಿವಾಟು ಸಾಗಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>