ಹಾಸನ: ‘ಕೊಟ್ಟಿರಬಹುದು, ಕೊಡದೇ ಇರಬಹುದು, ಅದು ಆಯೋಗಕ್ಕೆ ತಲುಪಿರಬಹುದು, ತಲುಪದೇ ಇರಬಹುದು. ಎಲ್ಲಾವನ್ನು ನಿಮಗೆ ಹೇಳಲು ಆಗುವುದಿಲ್ಲ...’
ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಾಮಪತ್ರ ವೇಳೆ ಸಲ್ಲಿಸಿರುವ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ಕೊಟ್ಟಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉತ್ತರಿಸಿದ್ದು ಹೀಗೆ.
‘ಚುನಾವಣಾ ಆಯೋಗಕ್ಕೆ ವರದಿ ಕೊಟ್ಟಿರುವ ಕುರಿತು ನಿಮಗೆ ಹೇಳಲು ಆಗುವುದಿಲ್ಲ. ಇದು ಮತ ಎಣಿಕೆ ಕುರಿತು ಮಾಹಿತಿ ನೀಡಲು ಕರೆದಿರುವ ಮಾಧ್ಯಮಗೋಷ್ಠಿ’ ಎಂದು ಹೇಳಿ ಹೊರಡಲು ಸಿದ್ದರಾದರು.
ವರದಿ ಕೊಟ್ಟಿದ್ದೀರಾ ಇಲ್ಲವೋ ಹೇಳಿ ಎಂದು ಮತ್ತೆ ಮಾಧ್ಯಮದವರು ಪ್ರಶ್ನಿಸಿದಾಗ, ‘ಹೌದು ಆಯೋಗಕ್ಕೆ ವರದಿ ಕೊಟ್ಟಿದ್ದೇನೆ. ವಿಚಾರಣೆ ನಡೆಯುತ್ತಿರುವುದರಿಂದ ಎಲ್ಲಾ ಮಾಹಿತಿ ನೀಡಲು ಆಗುವುದಿಲ್ಲ’ ಎಂದು ಉತ್ತರಿಸಿ ಹೊರಟರು.