<p><strong>ಹಾಸನ</strong>: ಸಮಾಜದಲ್ಲಿ ಮಕ್ಕಳಿಲ್ಲದ ದಂಪತಿಗಳನ್ನು ಹಿಂದೆ ಕೀಳಾಗಿ ನೋಡುವ ಪ್ರವೃತ್ತಿ ಇದ್ದರೂ ಈಗ ಕಾಲ ಬದಲಾಗಿದೆ. ಅನಧಿಕೃತವಾಗಿ ಮಗುವನ್ನು ದತ್ತು ಪಡೆಯದೇ ಕಾನೂನುಬದ್ಧ ಪ್ರಕ್ರಿಯೆಯನ್ನೇ ಅನುಸರಿಸುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.</p>.<p>ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದತ್ತು ಯೋಜನೆ, ಮಕ್ಕಳ ಸಂರಕ್ಷಣೆ, ಬಾಲ್ಯ ವಿವಾಹ ತಡೆ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆ ಕುರಿತಾದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕೆಲವು ದಶಕಗಳ ಹಿಂದೆ ದೇಶದ ಹಲವೆಡೆ ಗರ್ಭದಲ್ಲಿಯೇ ಹೆಣ್ಣು ಶಿಶುಗಳನ್ನು ಕೊಲ್ಲುವ ಪ್ರವೃತ್ತಿ ವ್ಯಾಪಕವಾಗಿತ್ತು. ಅದರ ಪರಿಣಾಮವಾಗಿ ಗಂಡು-ಹೆಣ್ಣು ಜನಸಂಖ್ಯೆಯ ಅನುಪಾತದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಜೊತೆಗೆ ಮಕ್ಕಳನ್ನು ಬೆಳೆಸುವುದು ಆರ್ಥಿಕ ಹಾಗೂ ಸಾಮಾಜಿಕವಾಗಿ ಕಷ್ಟಕರವಾಗುತ್ತಿರುವುದೂ ಸತ್ಯ ಎಂದು ಹೇಳಿದರು.</p>.<p>ಈ ಹಿನ್ನೆಲೆಯಲ್ಲಿ ದತ್ತು ಪ್ರಕ್ರಿಯೆಯ ಮಹತ್ವ ಹೆಚ್ಚಾಗಿದೆ. ಅನೇಕ ದಂಪತಿಗಳಿಗೆ ಮಗು ಪಡೆಯಲು ಸಾಧ್ಯವಾಗದ ಸಂದರ್ಭದಲ್ಲಿ ದತ್ತು ಒಂದು ಕುಟುಂಬಕ್ಕೆ ಆಶಾಕಿರಣವಾಗಬಹುದು. ಆದರೆ ದತ್ತು ಪಡೆಯುವಾಗ ಕಾನೂನುಬದ್ಧ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ಮಗುವನ್ನು ಕಾನೂನುಬದ್ಧವಾಗಿ ದತ್ತು ಪಡೆಯಲು 3–4 ವರ್ಷಗಳವರೆಗೆ ಕಾಯಬೇಕಾದರೂ ಕಾನೂನು ಪ್ರಕ್ರಿಯೆಯನ್ನೇ ಅನುಸರಿಸುವುದು ಅಗತ್ಯ ಎಂದು ತಿಳಿಸಿದರು.</p>.<p>ನಮ್ಮ ವಂಶದ ರಕ್ತದ ಮಗು ಬೇಕು ಎಂಬ ಮನೋಭಾವ ಮೂಢನಂಬಿಕೆ ಆಗಿದ್ದು, ಸಮಾಜದಲ್ಲಿ ಯಾರೂ ಅನಾಥರಾಗಬಾರದು ಎಂಬ ದೃಷ್ಟಿಯಿಂದ ದತ್ತು ಪ್ರಕ್ರಿಯೆಗೆ ಮಹತ್ವ ನೀಡಬೇಕು. ಎಲ್ಲೋ ಮಗು ಸಿಕ್ಕಿತು ಎಂದು ಕಾನೂನು ಕ್ರಮಗಳಿಲ್ಲದೇ ಮನೆಗೆ ಕರೆದುಕೊಂಡು ಹೋಗುವುದು ತಪ್ಪು. ಇಂತಹ ಕ್ರಮಗಳು ಅಪರಾಧವಾಗುತ್ತವೆ ಎಂದು ಎಚ್ಚರಿಸಿದರು.</p>.<p>ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಿಲ್, ಜಿಲ್ಲಾ ಪಂಚಾಯಿತಿ ಉಪ ಯೋಜನಾಧಿಕಾರಿ ಸುನೀತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಧರಣಿ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.</p>.<p><strong>ಮಕ್ಕಳ ಪೋಷಣೆಯಲ್ಲೂ ಹಲವು ಸವಾಲು </strong></p><p>ಒಂದು ಮಗುವಿನ ಪೋಷಕರಾಗುವುದು ಸುಲಭದ ಮಾತಲ್ಲ. ಅದಕ್ಕೆ ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿ ಅಗತ್ಯವಿದೆ. ಹಿಂದೆ ಮಗು ಇಲ್ಲದ ಮಹಿಳೆಯನ್ನು ಬಂಜೆ ಎಂದು ಕರೆಯುವ ನಕಾರಾತ್ಮಕ ಮನೋಭಾವ ಇತ್ತು. ಇದರಿಂದ ಕುಟುಂಬಗಳನ್ನೇ ಕೆಟ್ಟ ರೀತಿಯಲ್ಲಿ ನೋಡುವಂತಾಗಿತ್ತು ಎಂದು ಜಿಲ್ಲಾಧಿಕಾರಿ ಲತಾಕುಮಾರಿ ತಿಳಿಸಿದರು. ಮಗುವನ್ನು 9 ತಿಂಗಳು ಹೊಟ್ಟೆಯಲ್ಲಿ ಧರಿಸುವುದಕ್ಕಿಂತ ಜನನದ ನಂತರ ಸಾಕಿ ಬೆಳೆಸುವುದು ದೊಡ್ಡ ಜವಾಬ್ದಾರಿ. ಹಿಂದೆ ತುಂಬು ಕುಟುಂಬ ವ್ಯವಸ್ಥೆ ಬಲವಾಗಿದ್ದರಿಂದ ತಂದೆ-ತಾಯಿ ಅಜ್ಜಿ-ತಾತ ಹಾಗೂ ಸಂಬಂಧಿಕರ ಸಹಕಾರದಿಂದ ಮಕ್ಕಳ ಬೆಳವಣಿಗೆ ಸಮಗ್ರವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿ-ಮಗು ಎಂಬ ಸಣ್ಣ ಕುಟುಂಬ ವ್ಯವಸ್ಥೆ ಹೆಚ್ಚಾಗಿದ್ದು ಮಕ್ಕಳ ಪೋಷಣೆಯಲ್ಲೂ ಹಲವು ಸವಾಲುಗಳು ಎದುರಾಗುತ್ತಿವೆ ಎಂದು ಹೇಳಿದರು.</p>.<p><strong>ತಾಯ್ತನದ ಅರ್ಥ ತಿಳಿಸಿದ ನಾಟಕ</strong></p><p> ರಂಗಭೂಮಿ ಕಲಾವಿದೆ ಪೂಜಾ ರಘುನಂದನ್ ಅವರಿಂದ ‘ತಾಯಿಯಾಗುವುದೆಂದರೆ’ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಿತು. ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ಈ ನಾಟಕವು ತಾಯ್ತನದ ಅರ್ಥವನ್ನು ಪ್ರೀತಿಯ ಮೂಲಕ ವಿಸ್ತರಿಸುವ ಸಂದೇಶ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ</strong>: ಸಮಾಜದಲ್ಲಿ ಮಕ್ಕಳಿಲ್ಲದ ದಂಪತಿಗಳನ್ನು ಹಿಂದೆ ಕೀಳಾಗಿ ನೋಡುವ ಪ್ರವೃತ್ತಿ ಇದ್ದರೂ ಈಗ ಕಾಲ ಬದಲಾಗಿದೆ. ಅನಧಿಕೃತವಾಗಿ ಮಗುವನ್ನು ದತ್ತು ಪಡೆಯದೇ ಕಾನೂನುಬದ್ಧ ಪ್ರಕ್ರಿಯೆಯನ್ನೇ ಅನುಸರಿಸುವುದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.</p>.<p>ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದತ್ತು ಯೋಜನೆ, ಮಕ್ಕಳ ಸಂರಕ್ಷಣೆ, ಬಾಲ್ಯ ವಿವಾಹ ತಡೆ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆ ಕುರಿತಾದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕೆಲವು ದಶಕಗಳ ಹಿಂದೆ ದೇಶದ ಹಲವೆಡೆ ಗರ್ಭದಲ್ಲಿಯೇ ಹೆಣ್ಣು ಶಿಶುಗಳನ್ನು ಕೊಲ್ಲುವ ಪ್ರವೃತ್ತಿ ವ್ಯಾಪಕವಾಗಿತ್ತು. ಅದರ ಪರಿಣಾಮವಾಗಿ ಗಂಡು-ಹೆಣ್ಣು ಜನಸಂಖ್ಯೆಯ ಅನುಪಾತದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಜೊತೆಗೆ ಮಕ್ಕಳನ್ನು ಬೆಳೆಸುವುದು ಆರ್ಥಿಕ ಹಾಗೂ ಸಾಮಾಜಿಕವಾಗಿ ಕಷ್ಟಕರವಾಗುತ್ತಿರುವುದೂ ಸತ್ಯ ಎಂದು ಹೇಳಿದರು.</p>.<p>ಈ ಹಿನ್ನೆಲೆಯಲ್ಲಿ ದತ್ತು ಪ್ರಕ್ರಿಯೆಯ ಮಹತ್ವ ಹೆಚ್ಚಾಗಿದೆ. ಅನೇಕ ದಂಪತಿಗಳಿಗೆ ಮಗು ಪಡೆಯಲು ಸಾಧ್ಯವಾಗದ ಸಂದರ್ಭದಲ್ಲಿ ದತ್ತು ಒಂದು ಕುಟುಂಬಕ್ಕೆ ಆಶಾಕಿರಣವಾಗಬಹುದು. ಆದರೆ ದತ್ತು ಪಡೆಯುವಾಗ ಕಾನೂನುಬದ್ಧ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ಮಗುವನ್ನು ಕಾನೂನುಬದ್ಧವಾಗಿ ದತ್ತು ಪಡೆಯಲು 3–4 ವರ್ಷಗಳವರೆಗೆ ಕಾಯಬೇಕಾದರೂ ಕಾನೂನು ಪ್ರಕ್ರಿಯೆಯನ್ನೇ ಅನುಸರಿಸುವುದು ಅಗತ್ಯ ಎಂದು ತಿಳಿಸಿದರು.</p>.<p>ನಮ್ಮ ವಂಶದ ರಕ್ತದ ಮಗು ಬೇಕು ಎಂಬ ಮನೋಭಾವ ಮೂಢನಂಬಿಕೆ ಆಗಿದ್ದು, ಸಮಾಜದಲ್ಲಿ ಯಾರೂ ಅನಾಥರಾಗಬಾರದು ಎಂಬ ದೃಷ್ಟಿಯಿಂದ ದತ್ತು ಪ್ರಕ್ರಿಯೆಗೆ ಮಹತ್ವ ನೀಡಬೇಕು. ಎಲ್ಲೋ ಮಗು ಸಿಕ್ಕಿತು ಎಂದು ಕಾನೂನು ಕ್ರಮಗಳಿಲ್ಲದೇ ಮನೆಗೆ ಕರೆದುಕೊಂಡು ಹೋಗುವುದು ತಪ್ಪು. ಇಂತಹ ಕ್ರಮಗಳು ಅಪರಾಧವಾಗುತ್ತವೆ ಎಂದು ಎಚ್ಚರಿಸಿದರು.</p>.<p>ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಿಲ್, ಜಿಲ್ಲಾ ಪಂಚಾಯಿತಿ ಉಪ ಯೋಜನಾಧಿಕಾರಿ ಸುನೀತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಧರಣಿ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.</p>.<p><strong>ಮಕ್ಕಳ ಪೋಷಣೆಯಲ್ಲೂ ಹಲವು ಸವಾಲು </strong></p><p>ಒಂದು ಮಗುವಿನ ಪೋಷಕರಾಗುವುದು ಸುಲಭದ ಮಾತಲ್ಲ. ಅದಕ್ಕೆ ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿ ಅಗತ್ಯವಿದೆ. ಹಿಂದೆ ಮಗು ಇಲ್ಲದ ಮಹಿಳೆಯನ್ನು ಬಂಜೆ ಎಂದು ಕರೆಯುವ ನಕಾರಾತ್ಮಕ ಮನೋಭಾವ ಇತ್ತು. ಇದರಿಂದ ಕುಟುಂಬಗಳನ್ನೇ ಕೆಟ್ಟ ರೀತಿಯಲ್ಲಿ ನೋಡುವಂತಾಗಿತ್ತು ಎಂದು ಜಿಲ್ಲಾಧಿಕಾರಿ ಲತಾಕುಮಾರಿ ತಿಳಿಸಿದರು. ಮಗುವನ್ನು 9 ತಿಂಗಳು ಹೊಟ್ಟೆಯಲ್ಲಿ ಧರಿಸುವುದಕ್ಕಿಂತ ಜನನದ ನಂತರ ಸಾಕಿ ಬೆಳೆಸುವುದು ದೊಡ್ಡ ಜವಾಬ್ದಾರಿ. ಹಿಂದೆ ತುಂಬು ಕುಟುಂಬ ವ್ಯವಸ್ಥೆ ಬಲವಾಗಿದ್ದರಿಂದ ತಂದೆ-ತಾಯಿ ಅಜ್ಜಿ-ತಾತ ಹಾಗೂ ಸಂಬಂಧಿಕರ ಸಹಕಾರದಿಂದ ಮಕ್ಕಳ ಬೆಳವಣಿಗೆ ಸಮಗ್ರವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿ-ಮಗು ಎಂಬ ಸಣ್ಣ ಕುಟುಂಬ ವ್ಯವಸ್ಥೆ ಹೆಚ್ಚಾಗಿದ್ದು ಮಕ್ಕಳ ಪೋಷಣೆಯಲ್ಲೂ ಹಲವು ಸವಾಲುಗಳು ಎದುರಾಗುತ್ತಿವೆ ಎಂದು ಹೇಳಿದರು.</p>.<p><strong>ತಾಯ್ತನದ ಅರ್ಥ ತಿಳಿಸಿದ ನಾಟಕ</strong></p><p> ರಂಗಭೂಮಿ ಕಲಾವಿದೆ ಪೂಜಾ ರಘುನಂದನ್ ಅವರಿಂದ ‘ತಾಯಿಯಾಗುವುದೆಂದರೆ’ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಿತು. ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ಈ ನಾಟಕವು ತಾಯ್ತನದ ಅರ್ಥವನ್ನು ಪ್ರೀತಿಯ ಮೂಲಕ ವಿಸ್ತರಿಸುವ ಸಂದೇಶ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>