<p><strong>ಬೇಲೂರು</strong>: ತಾಲ್ಲೂಕಿನ ಕಣಗುಪ್ಪೆಯಲ್ಲಿ ಭಾನುವಾರ ರೈತ ರಾಜಶೆಟ್ಟಿ ಅವರನ್ನು ಸಾವಿಗೆ ಕಾರಣವಾಗಿ, ಕೆರೆಗೋಡುವಿನಲ್ಲಿ ಬುಧವಾರ ಸೆರೆಯಾಗಿದ್ದ ಒಂಟಿ ಕೋರೆಯ ಕಾಡಾನೆ ಪರಾರಿಯಾಗಿದೆ.</p>.<p>ಅದನ್ನು ಸೆರೆಹಿಡಿಯಲು ಮಂಗಳವಾರ ಬಿಕ್ಕೋಡಿನ ಆನೆ ಶಿಬಿರಕ್ಕೆ ಸುಗ್ರೀವ, ಧನಂಜಯ, ಹರ್ಷ, ಲಕ್ಷ್ಮಣ, ಶ್ರೀರಾಮ, ಅಯ್ಯಪ್ಪ ಸಾಕಾನೆಗಳನ್ನು ಕರೆತರಲಾಗಿತ್ತು. ಬುಧವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆದು, ಮಧ್ಯಾಹ್ನದ ನಂತರ ಕೆರೆಗೋಡಿನ ದೊಲನಮನೆ ಬಳಿಯ ಕಾಫಿ ತೋಟವೊಂದರಲ್ಲಿ ಪತ್ತೆಯಾಗಿತ್ತು.</p>.<p>ಅರಿವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಓಡಿ ಪ್ರಜ್ಞೆ ತಪ್ಪಿ ಬಿದ್ದಿತ್ತು. ಸಾಕಾನೆಗಳ ನೆರವಿನಿಂದ ಕುತ್ತಿಗೆ ಹಾಗೂ ಕಾಲಿಗೆ ಹಗ್ಗ ಕಟ್ಟಿ ಆರೈಕೆ ಮಾಡಲಾಗಿತ್ತು. ಎಚ್ಚೆತ್ತ ಆನೆಯು ಕುಮ್ಕಿ ಆನೆಗಳೊಂದಿಗೆ ಕಾಳಗಕ್ಕೆ ಇಳಿದಿತ್ತು.</p>.<p>ಬಳಿಕ ಆನೆಗೆ ರಿವರ್ಸಲ್ ಇಂಜೆಕ್ಷನ್ ನೀಡಲಾಗಿತ್ತು. ಮತ್ತೆ ಎಚ್ಚರಗೊಂಡ ಆನೆಯು ಕುತ್ತಿಗೆ ಹಾಗೂ ಕಾಲಿಗೆ ಕಟ್ಟಿದ್ದ ಹಗ್ಗದಿಂದ ಬಿಡಿಸಿಕೊಂಡು ಪರಾರಿಯಾಯಿತು. ಆನೆಯು ಏಕಾಏಕಿ ನುಗ್ಗಿದ್ದರಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಚೆಲ್ಲಾಪಿಲ್ಲಿಯಾಗಿ ಓಡಿದರು. ಹಲವರು ಪ್ರಾಣಾಪಾಯದಿಂದ ಪಾರಾದರು.</p>.<p>ಕತ್ತಲಾಗುವವರೆಗೂ ಆನೆ ಸೆರೆಗೆ ಕಾರ್ಯಾಚರಣೆ ನಡೆಯಿತು. ಗುರುವಾರ ಕಾರ್ಯಾಚರಣೆ ಮರು ಆರಂಭಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳೀಯರಲ್ಲಿ ಆತಂಕ ಮೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇಲೂರು</strong>: ತಾಲ್ಲೂಕಿನ ಕಣಗುಪ್ಪೆಯಲ್ಲಿ ಭಾನುವಾರ ರೈತ ರಾಜಶೆಟ್ಟಿ ಅವರನ್ನು ಸಾವಿಗೆ ಕಾರಣವಾಗಿ, ಕೆರೆಗೋಡುವಿನಲ್ಲಿ ಬುಧವಾರ ಸೆರೆಯಾಗಿದ್ದ ಒಂಟಿ ಕೋರೆಯ ಕಾಡಾನೆ ಪರಾರಿಯಾಗಿದೆ.</p>.<p>ಅದನ್ನು ಸೆರೆಹಿಡಿಯಲು ಮಂಗಳವಾರ ಬಿಕ್ಕೋಡಿನ ಆನೆ ಶಿಬಿರಕ್ಕೆ ಸುಗ್ರೀವ, ಧನಂಜಯ, ಹರ್ಷ, ಲಕ್ಷ್ಮಣ, ಶ್ರೀರಾಮ, ಅಯ್ಯಪ್ಪ ಸಾಕಾನೆಗಳನ್ನು ಕರೆತರಲಾಗಿತ್ತು. ಬುಧವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆದು, ಮಧ್ಯಾಹ್ನದ ನಂತರ ಕೆರೆಗೋಡಿನ ದೊಲನಮನೆ ಬಳಿಯ ಕಾಫಿ ತೋಟವೊಂದರಲ್ಲಿ ಪತ್ತೆಯಾಗಿತ್ತು.</p>.<p>ಅರಿವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಓಡಿ ಪ್ರಜ್ಞೆ ತಪ್ಪಿ ಬಿದ್ದಿತ್ತು. ಸಾಕಾನೆಗಳ ನೆರವಿನಿಂದ ಕುತ್ತಿಗೆ ಹಾಗೂ ಕಾಲಿಗೆ ಹಗ್ಗ ಕಟ್ಟಿ ಆರೈಕೆ ಮಾಡಲಾಗಿತ್ತು. ಎಚ್ಚೆತ್ತ ಆನೆಯು ಕುಮ್ಕಿ ಆನೆಗಳೊಂದಿಗೆ ಕಾಳಗಕ್ಕೆ ಇಳಿದಿತ್ತು.</p>.<p>ಬಳಿಕ ಆನೆಗೆ ರಿವರ್ಸಲ್ ಇಂಜೆಕ್ಷನ್ ನೀಡಲಾಗಿತ್ತು. ಮತ್ತೆ ಎಚ್ಚರಗೊಂಡ ಆನೆಯು ಕುತ್ತಿಗೆ ಹಾಗೂ ಕಾಲಿಗೆ ಕಟ್ಟಿದ್ದ ಹಗ್ಗದಿಂದ ಬಿಡಿಸಿಕೊಂಡು ಪರಾರಿಯಾಯಿತು. ಆನೆಯು ಏಕಾಏಕಿ ನುಗ್ಗಿದ್ದರಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಚೆಲ್ಲಾಪಿಲ್ಲಿಯಾಗಿ ಓಡಿದರು. ಹಲವರು ಪ್ರಾಣಾಪಾಯದಿಂದ ಪಾರಾದರು.</p>.<p>ಕತ್ತಲಾಗುವವರೆಗೂ ಆನೆ ಸೆರೆಗೆ ಕಾರ್ಯಾಚರಣೆ ನಡೆಯಿತು. ಗುರುವಾರ ಕಾರ್ಯಾಚರಣೆ ಮರು ಆರಂಭಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳೀಯರಲ್ಲಿ ಆತಂಕ ಮೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>