ಬೇಲೂರಿನಿಂದ ಬಾಣಾವಾರಕ್ಕೆ ಕಾಫಿ ಹೊಟ್ಟಿನ ಚೀಲಗಳನ್ನು ತುಂಬಿಕೊಂಡು ಹೋಗುವ ಸಂದರ್ಭದಲ್ಲಿ ಹೆಬ್ಬಾಳಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಕೆರೆಗೆ ಬಿದ್ದಿದ್ದು, ಲಾರಿಯಲ್ಲಿ ತುಂಬಿದ ಕಾಫಿ ಹೊಟ್ಟಿನ ಚೀಲಗಳು ಚೆಲ್ಲಾಪಿಲ್ಲಿಯಾಗಿವೆ. ಚೀಲವನ್ನು ಇನ್ನೊಂದು ಲಾರಿಗೆ ತುಂಬಲಾಗಿದ್ದು, ಪಲ್ಟಿಯಾಗಿ ಬಿದ್ದಿದ್ದ ಲಾರಿಯನ್ನು ಕ್ರೇನ್ ಮೂಲಕ ಕೆರೆಯಿಂದ ಮೆಲಕ್ಕೆ ಎತ್ತಲಾಯಿತು.