<p>ಕಿಕ್ಕೇರಿ: ಹೋಬಳಿಗೆ ಸಂಪರ್ಕ ಕೊಂಡಿಯಾಗಿರುವ ಮಾದಾಪುರ ಗೇಟ್ ಬಳಿ ಸಾರಿಗೆ ವಾಹನಗಳ ನಿಲುಗಡೆಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.</p>.<p>ಗೇಟ್ ಬಳಿ ಬಸ್ ನಿಲುಗಡೆಗೆ ಕೇಂದ್ರ ಕಚೇರಿ ಮುಖ್ಯ ಸಂಚಾರಿ ಅಧಿಕಾರಿಗಳ ಆದೇಶವಿದ್ದರೂ ಬಸ್ ನಿರ್ವಾಹಕರು ಮೊಂಡುವಾದ ಮಾಡುತ್ತಾರೆ. ಈ ಹಿಂದೆ ಗೇಟ್ಗೆ ಟಿಕೇಟ್ ನೀಡಿ ನಿಲ್ಲಿಸುತ್ತಿದ್ದ ಅರಸೀಕೆರೆ ಡಿಪೋ ಹಲವು ಬಸ್ಗಳೂ ಈಚೆಗೆ ನಿಲ್ಲಿಸುತ್ತಿಲ್ಲ. ಸುತ್ತಮುತ್ತಲ ಹತ್ತಾರು ಗ್ರಾಮಗಳ ರೈತರಿಗೆ, ವಿದ್ಯಾರ್ಥಿಗಳಿಗೆ, ಕೂಲಿಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಈ ನಿಲ್ದಾಣವು ಉದ್ದಿನಮಲ್ಲನ ಹೊಸೂರು, ಊಗಿನಹಳ್ಳಿ, ಈಚಲುಗುಡ್ಡೆಕಾವಲು, ಗಾಣದಹಳ್ಳಿ, ಗಾಣದಹಳ್ಳಿ ಕೊಪ್ಪಲು, ತುಳಸಿ, ಮಂಡಲೀಕನಹಳ್ಳಿ, ಐಕನಹಳ್ಳಿ, ಬಸವನಹಳ್ಳಿ, ಕಾಂತರಾಜಪುರ, ಕಡಹೆಮ್ಮಿಗೆ, ಮಾದಾಪುರ, ಹಳೆಮಾದಾಪುರದಂತಹ ಹಲವು ಗ್ರಾಮಗಳನ್ನು ಸಂಪರ್ಕಿಸುತ್ತದೆ. ಬಸ್ ನಿಲ್ಲದಿರುವುದರಿಂದ ನಿತ್ಯ ವಿದ್ಯಾರ್ಥಿಗಳು ಕಿಕ್ಕೇರಿ ಹೋಬಳಿ ಕೇಂದ್ರಕ್ಕೆ 5 ಕಿ.ಮೀ. ಕಾಲ್ನಡಿಗೆಯಲ್ಲಿ ಅಥವಾ ಖಾಸಗಿ ವಾಹನಗಳನ್ನು ಆಶ್ರಯಿಸಿ ಬರಬೇಕಿದೆ. ಹೆಣ್ಣುಮಕ್ಕಳಿಗೆ ಓಡಾಡಲು ಕಷ್ಟವಾಗಲಿದೆ. ಕೂಡಲೇ ಇತ್ತ ಅಧಿಕಾರಿಗಳು ಗಮನಹರಿಸದಿದ್ದರೆ ಹೋರಾಟ ಅನೀವಾರ್ಯವಾಗಲಿದೆ’ ಎಂದು ಎಚ್ಚರಿಸಿದ್ದಾರೆ.</p>.<p>‘ಬಸ್ ನಿಲುಗಡೆಯಾದರೆ ನೂರಾರು ವಿದ್ಯಾರ್ಥಿಗಳು ಭವಿಷ್ಯ ಕಟ್ಟಿಕೊಳ್ಳಬಹುದು’ ಎಂದು ಊಗಿನಹಳ್ಳಿಯವಿದ್ಯಾರ್ಥಿ ಎಚ್.ಎಂ. ದಯಾನಂದ್ ತಿಳಿಸಿದರು.</p>.<p>ಪ್ರತಿಭಟನೆಯಲ್ಲಿ ಊಗಿನಹಳ್ಳಿ ಗ್ರಾಮದ ರೇಖಾ, ಹೇಮಂತ್, ಮಹೇಶ್, ನಿಂಗೇಗೌಡ, ವಿಜಯಕುಮಾರ್, ತುಳಸಿ ದಯಾನಂದ್, ನಾಗಣ್ಣ, ಉದ್ದಿನಮಲ್ಲನಹೊಸೂರು ಮಂಜೇಗೌಡ, ಚಂದ್ರ ಶೇಖರ್, ಪುಟ್ಟಲಿಂಗ, ಐಕನಹಳ್ಳಿ ರಮೇಶ್, ಗಾಣದಹಳ್ಳಿ ತನ್ಮಯ್, ಸಣ್ಣೇಗೌಡ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-40-761692376</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಿಕ್ಕೇರಿ: ಹೋಬಳಿಗೆ ಸಂಪರ್ಕ ಕೊಂಡಿಯಾಗಿರುವ ಮಾದಾಪುರ ಗೇಟ್ ಬಳಿ ಸಾರಿಗೆ ವಾಹನಗಳ ನಿಲುಗಡೆಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.</p>.<p>ಗೇಟ್ ಬಳಿ ಬಸ್ ನಿಲುಗಡೆಗೆ ಕೇಂದ್ರ ಕಚೇರಿ ಮುಖ್ಯ ಸಂಚಾರಿ ಅಧಿಕಾರಿಗಳ ಆದೇಶವಿದ್ದರೂ ಬಸ್ ನಿರ್ವಾಹಕರು ಮೊಂಡುವಾದ ಮಾಡುತ್ತಾರೆ. ಈ ಹಿಂದೆ ಗೇಟ್ಗೆ ಟಿಕೇಟ್ ನೀಡಿ ನಿಲ್ಲಿಸುತ್ತಿದ್ದ ಅರಸೀಕೆರೆ ಡಿಪೋ ಹಲವು ಬಸ್ಗಳೂ ಈಚೆಗೆ ನಿಲ್ಲಿಸುತ್ತಿಲ್ಲ. ಸುತ್ತಮುತ್ತಲ ಹತ್ತಾರು ಗ್ರಾಮಗಳ ರೈತರಿಗೆ, ವಿದ್ಯಾರ್ಥಿಗಳಿಗೆ, ಕೂಲಿಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಈ ನಿಲ್ದಾಣವು ಉದ್ದಿನಮಲ್ಲನ ಹೊಸೂರು, ಊಗಿನಹಳ್ಳಿ, ಈಚಲುಗುಡ್ಡೆಕಾವಲು, ಗಾಣದಹಳ್ಳಿ, ಗಾಣದಹಳ್ಳಿ ಕೊಪ್ಪಲು, ತುಳಸಿ, ಮಂಡಲೀಕನಹಳ್ಳಿ, ಐಕನಹಳ್ಳಿ, ಬಸವನಹಳ್ಳಿ, ಕಾಂತರಾಜಪುರ, ಕಡಹೆಮ್ಮಿಗೆ, ಮಾದಾಪುರ, ಹಳೆಮಾದಾಪುರದಂತಹ ಹಲವು ಗ್ರಾಮಗಳನ್ನು ಸಂಪರ್ಕಿಸುತ್ತದೆ. ಬಸ್ ನಿಲ್ಲದಿರುವುದರಿಂದ ನಿತ್ಯ ವಿದ್ಯಾರ್ಥಿಗಳು ಕಿಕ್ಕೇರಿ ಹೋಬಳಿ ಕೇಂದ್ರಕ್ಕೆ 5 ಕಿ.ಮೀ. ಕಾಲ್ನಡಿಗೆಯಲ್ಲಿ ಅಥವಾ ಖಾಸಗಿ ವಾಹನಗಳನ್ನು ಆಶ್ರಯಿಸಿ ಬರಬೇಕಿದೆ. ಹೆಣ್ಣುಮಕ್ಕಳಿಗೆ ಓಡಾಡಲು ಕಷ್ಟವಾಗಲಿದೆ. ಕೂಡಲೇ ಇತ್ತ ಅಧಿಕಾರಿಗಳು ಗಮನಹರಿಸದಿದ್ದರೆ ಹೋರಾಟ ಅನೀವಾರ್ಯವಾಗಲಿದೆ’ ಎಂದು ಎಚ್ಚರಿಸಿದ್ದಾರೆ.</p>.<p>‘ಬಸ್ ನಿಲುಗಡೆಯಾದರೆ ನೂರಾರು ವಿದ್ಯಾರ್ಥಿಗಳು ಭವಿಷ್ಯ ಕಟ್ಟಿಕೊಳ್ಳಬಹುದು’ ಎಂದು ಊಗಿನಹಳ್ಳಿಯವಿದ್ಯಾರ್ಥಿ ಎಚ್.ಎಂ. ದಯಾನಂದ್ ತಿಳಿಸಿದರು.</p>.<p>ಪ್ರತಿಭಟನೆಯಲ್ಲಿ ಊಗಿನಹಳ್ಳಿ ಗ್ರಾಮದ ರೇಖಾ, ಹೇಮಂತ್, ಮಹೇಶ್, ನಿಂಗೇಗೌಡ, ವಿಜಯಕುಮಾರ್, ತುಳಸಿ ದಯಾನಂದ್, ನಾಗಣ್ಣ, ಉದ್ದಿನಮಲ್ಲನಹೊಸೂರು ಮಂಜೇಗೌಡ, ಚಂದ್ರ ಶೇಖರ್, ಪುಟ್ಟಲಿಂಗ, ಐಕನಹಳ್ಳಿ ರಮೇಶ್, ಗಾಣದಹಳ್ಳಿ ತನ್ಮಯ್, ಸಣ್ಣೇಗೌಡ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260517-40-761692376</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>