‘ಕಾಳಿ ವಿಗ್ರಹವನ್ನು ಮೊದಲಿನಂತೆ ಜೋಡಿಸಿದರೂ ಪೂಜೆಗೆ ಒಳಪಡುವುದಿಲ್ಲ. ವಿಗ್ರಹ ಭಿನ್ನವಾದರೆ ಪೂಜೆ ಮಾಡುವುದಿಲ್ಲ. ಬದಲಿಗೆ ಕಾಳಿ ವಿಗ್ರಹದ ರೀತಿಯಲ್ಲಿಯೇ ಮತ್ತೊಂದು ವಿಗ್ರಹ ಮಾಡಿಸಿ, ಪ್ರತಿಷ್ಠಾಪನೆ ಮಾಡಬೇಕು. ದೇವಸ್ಥಾನದಲ್ಲಿ ನಡೆಯುವಂತಹ ಧಾರ್ಮಿಕ ಕಾರ್ಯವನ್ನು ಮುಂದುವರೆಸಲು ಅವಕಾಶ ನೀಡಬೇಕು. ದೇಗುಲಕ್ಕೆ ಸಿಸಿಟಿವಿ ಕ್ಯಾಮೆರಾ, ಸೋಲಾರ್ ದೀಪ, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಗ್ರಾಮಸ್ಥರು ಪ್ರಾದೇಶಿಕ ನಿರ್ದೇಶಕಿಗೆ ಮನವಿ ಮಾಡಿದರು.