‘ಅನ್ಯಾಯಕ್ಕೊಳಗಾಗಿರುವ ಈ ಬಡ ನೌಕರರಿಗೆ ಕೂಡಲೇ ನ್ಯಾಯ ಕೊಡಿಸಬೇಕು ಹಾಗೂ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿರುವ ಮಾತಾ ಟೆಕ್ನಾಲಜೀಸ್ ವಿರುದ್ಧ ಕಾನೂನು ಕ್ರಮ ಜರುಗಿಸಿ ನೌಕರರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಬೇಕು’ ಎಂದು ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಟ್ಟಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೆಶ್, ಕಾರ್ಯಕರ್ತರಾದ ಯೋಗೇಶ್, ಅನಿಲ್ ಕುಮಾರ್, ವಿಶ್ವನಾಥ್, ಕಾಂತರಾಜು, ಸೋಮೇಶಖರ್, ಅನಂತಕುಮಾರ್ ಇದ್ದರು.