ಇದು ಸಾಲ ಪಡೆದ ಜನರು ಮತ್ತು ಮೈಕ್ರೊ ಫೈನಾನ್ಸ್ ಕಂಪನಿಗಳ ಸಿಬ್ಬಂದಿ ನಡುವೆ ಘರ್ಷಣೆಗೆ ಕಾರಣವಾಯಿತು. ಪರಸ್ಪರ ಕೈಕೈ ಮಿಲಾಯಿಸಿದ ಎರಡು ಗುಂಪುಗಳು ಕುರ್ಚಿಗಳನ್ನು ಕಿತ್ತೆಸೆದರು. ಈ ಹಂತದಲ್ಲಿ ಸಭೆ ಗದ್ದಲ, ಗೊಂದಲದಿಂದ ಕೂಡಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಗಲಭೆ ನಿರತರನ್ನು ಚದುರಿಸಿದರು. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ, ನಂತರ ಬಿಡುಗಡೆ ಮಾಡಿದರು.