‘ಮುಂಗಾರಿನಲ್ಲಿ ಮಳೆ ಇಲ್ಲದೆ ಯಾವ ಬೆಳೆಯೂ ಕೈಹಿಡಿಯಲಿಲ್ಲ. ಈಗ ಮಳೆ ಹೆಚ್ಚಾಗಿ ಬೆಳೆ ಹಾಳಾಗಿದೆ. ಈ ವರ್ಷ ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡರಿಂದಲೂ ರೈತರು ಸೋತು ಹೋಗಿದ್ದಾರೆ. ಜಾನುವಾರುಗಳ ಮೇವಿಗೆ ಹುಲ್ಲು, ಜನರ ಆಹಾರಕ್ಕೆ ರಾಗಿ ದೊರಕುತ್ತದೆ ಎಂದು ರಾಗಿ ಬೆಳೆ ಮಾಡಿದ್ದೇವು. ಈಗ ಹುಲ್ಲು ರಾಗಿ ಎರಡೂ ಇಲ್ಲದಂತಾಗಿದೆ. ಬಿತ್ತನೆಯಿಂದ ಕಟಾವಿನವರೆಗೆ ₹ 10ರಿಂದ 15 ಸಾವಿರದವರೆಗೆ ವೆಚ್ಚವಾಗುತ್ತಿದೆ. ಈಗ ಬೆಳೆ ಹಣವನ್ನು ಕಳೆದುಕೊಂಡು ಬರಿಗೈನಲ್ಲಿದ್ದೇವೆ. ಮಳೆ ಬಂದರೂ ಮುಂದಿನ ಜೀವನಕ್ಕಾಗಿ ಪಡಬಾರದ ಕಷ್ಟ ಅನುಭವಿಸುವಂತಾಗಿದೆ’ ಎಂದು ರಾಜಗೆರೆ ಚಂದ್ರಯ್ಯ ಅಳಲು ತೋಡಿಕೊಂಡರು.